
ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕಿದ್ದ ಶಿಕ್ಷಕರು ಬೆಂಗಳೂರು ಚಲೋ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರೇ, ಪ್ರತಿನಿತ್ಯ ಶಾಲೆಗೆ ತೆರಳಬೇಕಿದ್ದ ಮಕ್ಕಳು ಮನೆಯತ್ತ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಶಾಲೆಗೆ ಬಂದು ಪಾಠ ಕೇಳಬೇಕಿದ್ದ ಮಕ್ಕಳು ಮನೆಯಲ್ಲಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಶಿಕ್ಷಕರ ಪ್ರತಿಭಟನೆ ನಡೆಯುತ್ತಿದೆ.ಆ ಪ್ರತಿಭಟನೆಯ ಹಿನ್ನೆಲೆ ರಾಜ್ಯಾದ್ಯಂತ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗಲು ಬೆಂಗಳೂರಿಗೆ ತೆರಳಿದ್ದಾರೆ. ಹೀಗಾಗಿ ನಿತ್ಯ ಬ್ಯಾಗ್ ಹಿಡಿದು ಶಾಲೆಗೆ ಬಂದ ಮಕ್ಕಳು ಶಾಕ್ ಒಳಗಾಗಿದ್ದಾರೆ.
ಬೆಳಗಾವಿಯ ಪೊಲೀಸ್ ಕ್ವಾರ್ಟರ್ಸ್ ನಲ್ಲಿರೋ ಸರ್ಕಾರಿ ಪ್ರಾಥಮಿಕ ಶಾಲೆ ಕೆ ಹೆಚ್ ಕ್ಯೂ 21 ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಶಾಲೆಗಳಿಗೆ ಅಘೋಷಿತ ರಜೆ ಘೋಷಣೆ ಮಾಡಿ ಬೆಂಗಳೂರಿಗೆ ತೆರಳಿದ್ದಾರೆ.
ಇತ್ತ ಶಾಲಾ ಮಕ್ಕಳು ಶಾಲೆ ಇದೆಯೋ ಇಲ್ಲವೋ ಎಂಬುದು ತಿಳಿದಯದೇ ಪರದಾಡುವಂತಾಗಿತ್ತು. ಕೆ ಹೆಚ್ ಕ್ಯೂ ಶಾಲೆಯಲ್ಲಿ ಒಟ್ಟು 240 ವಿದ್ಯಾರ್ಥಿಗಳಿದ್ದು ಶಾಲೆಗೆ ಅಘೋಷಿತ ರಜೆಯಿಂದಾಗಿ ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣ ಆಯ್ತು. ಮನಭಾರದ ಬ್ಯಾಗ್ ಹಿಡಿದು ಶಾಲೆಗೆ ಬಂದ ಮಕ್ಕಳು ಮತ್ತೆ ಮನೆಉ ಹಾದಿ ಹಿಡಿದರು. ಶಿಕ್ಷಣ ಇಲಾಖೆಯ ಕಡ್ಡಾಯವಾಗಿ ಎಲ್ಲಾ ಶಾಲಾ ಶಿಕ್ಷಕರು ಶಾಲೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದ್ದರೂ ಸಹಿತ ಶಾಲೆಗೆ ಶಿಕ್ಷಕರು ಚಕ್ಕರ್ ಹೊಡಿದ್ದಾರೆ.
ಪ್ರತಿಭಟನೆಯ ಹೆಸರಿನಲ್ಲಿ ಕೆಲ ಶಿಕ್ಷಕರು ಬೆಳಗಾವಿಯಲ್ಲಿದ್ದರೂ ಬೇರೆ ಬೇರೆ ಉದ್ಯೋಗ ಮಾಡುತ್ತಿದ್ದಾರೆ. ಅವರ ಮೇಲೂ ಕ್ರಮ ಜರುಗಿಸಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬೆಳಗಾವಿಯ ಡಿಸಿಪಿಐ ಮೋಹನ್ ಕುಮಾರ್ ಹಂಚಾಟೆ, ಬೆಂಗಳೂರಿಗೆ ಹೋಗಬೇಕಾದವರು ಬಿಇಒಗೆ ಮಾಹಿತಿ ನೀಡಿ ಹೊರಡಲು ಸೂಚನೆ ನೀಡಲಾಗಿತ್ತು. ಈ ಕುರಿತು ನನಗೂ ದೂರುಗಳು ಬರುತ್ತಿದ್ದು ಶಾಲೆಯಲ್ಲಿ ಕಡ್ಡಾಯವಾಗಿ ಇರಲೇಬೇಕು ಎಂದು ಈಗಾಗಲೇ ಶಿಕ್ಷಕರಿಗೆ ಸೂಚನೆ ನೀಡಲಾಗಿತ್ತು. ಶಾಲೆಗೆ ಗೈರಾದ ಶಿಕ್ಷಕರ ಬಗ್ಗೆ ವರದಿ ಪಡೆಯುತ್ತಿದ್ದೆವೆ. ಶಾಲೆಗೆ ಅನುಮತಿ ಪಡೆಯದ ಗೈರಾದ ಶಿಕ್ಷಕರ ವಿರುದ್ಧ 106 ಅಡಿಯಲ್ಲಿ ಕ್ರಮ ಕೈಗೊಳ್ಳುತ್ತೆವೆ ಎಂದರು.