
ಕೇರಳ ವೈನಾಡಿನ ಭೂಕುಸಿತದ ದುರಂತದಿಂದ ನಿರಾಶ್ರಿತರಾದ ಜನರಿಗೆ ಕೇರಳ ಸಕಾರ ಎರಡು ಪರಿಹಾರ ಶಿಬಿರ ಮೆಪ್ಪಡಿ ಗ್ರಾಮದಲ್ಲಿರುವ GHSS ಹೈ ಸ್ಕೂಲ್ನಲ್ಲಿ, ಸೆಂಟ್.ಜೋಸೆಫ್ ಹೈ ಸ್ಕೂಲ್ನಲ್ಲಿ ಎರಡು ನಿರಾಶ್ರಿತರ ಪರಿಹಾರ ಶಿಬಿರ ತೆರೆದಿದೆ.ಇದರಲ್ಲಿ 163 ಕುಟುಂಬಗಳು ಇರುವ ಒಂದು ಪರಿಹಾರ ಶಿಬಿರ ಮತ್ತು 450 ಜನರು ಇರುವ ಒಂದು ಶಿಬಿರ (191 ಪುರುಷರು,161 ಮಹಿಳೆಯರು, 98 ಮಕ್ಕಳು) ನಿರಾಶ್ರಿತರಿದ್ದಾರೆ.
ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ ವೈತ್ರಿ ಎಂಎಲ್ಎ ನಿರಾಶ್ರಿತರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಪರಿಹಾರ ಶಿಬಿರಕ್ಕೂ ಭೇಟಿ ಮಾಡಿ ಅಲ್ಲಿನ ಎಲ್ಲಾ ವ್ಯವಸ್ಥೆಗಳನ್ನು ತಿಳಿದುಕೊಂಡರು. ಮೆಪ್ಪಾಡದ ಪರಿಹಾರ ಶಿಬಿರಕ್ಕೆ ಯಾರಿಗೂ ಒಳ ಪ್ರವೇಶವಿಲ್ಲದಂತೆ ಬಿಗಿ ಭದ್ರತೆ ಮಾಡಲಾಗಿದೆ. ಪೊಲೀಸರು ಪಾಸ್ಗಳನ್ನು ನೀಡಿ ಪರಿಹಾರ ಶಿಬಿರಕ್ಕೆ ಒಳ ಪ್ರವೇಶ ನೀಡುತ್ತಿದ್ದಾರೆ.