
ಮಳೆಯಂದ ಅವಾಂತರಗೊಂಡ ಜಯದೇವ ಅಂಡರ್ ಪಾಸ್ ಬಾರೀ ಮಳೆಯಿಂದ ರಸ್ತೆಯಲ್ಲಿ ನೀರುನಿಂತು ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ. ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಗಿದೆ ಮತ್ತೆ ಇದಲ್ಲದೇ ಮೇಟ್ರೋ ಕಾಮಗಾರಿ ಕೂಡ ನಡೆಯುತ್ತಿರುವ ಹಿನ್ನಲೆಯಿಂದ ವಾಹನ ಸವಾರರಿಗೆ ಮಳೆಯಿಂದ ಸಂಕಷ್ಟ ಎದುರಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಶೀಲನೆ ಮಾಡಲು ಡಿಸಿಎಂ ಸ್ಥಳಕ್ಕೆ ಭೇಟಿ ನೀಡಿದರು.
ಸ್ಥಳಕ್ಕೆ ಭೇಟಿ ನೀಡಿದ ಡಿಕೆಶಿ ಹೂಳು ಬಿದ್ದ ಜಾಗ ನೋಡಿ ಗಾಬರಿಯಾದರು.ಅಧಿಕಾರಿಗಳಿಗೆ ಕೇಳಿದ ಡಿಕೆಶಿ ನೀರು ಹಗು ಜಾಗದಲ್ಲಿ ಎಳನೀರಿನ ಬುರುಡೆಗಳು ಹೋಗುತ್ತಿವೆ. ಇದರಿಂದ ಮ್ಯಾನ್ ಹೋಲ್ ಬ್ಲಾಕ್ ಆಗಿ ಮಳೆಯ ನೀರು ಇಲ್ಲಿಯೇ ನಿಂತಿದೆ.

ಬುರುಡೆಗಳು ಹಾಕಿದ್ದು ಯಾರು ಎಲ್ಲಿಂದ ಬಂದಿದೆ ಎಂದು ಡಿಕೆಶಿ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು ಡಿಕೆಶಿ ಅವರು ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಉತ್ತರ ನೀಡಲು ತಬ್ಬಿಬ್ಬಾದರು.ಅಧಿಕಾರಿಗಳು ಡಿಕೆಶಿಯವರ ಮುಂದೆಯೇ ತೆಂಗಿನ ಚಿಪ್ಪುಗಳನ್ನು ತೆಗಿಸಿದರು.ಜಯದೇವ ಅಂಡರ್ಪಾಸ್ ಅವಾಂತರ
