
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಪುಂಗನೂರು ಕ್ರಾಸ್ ನಲ್ಲಿ ಇಂದು ಮಾನಸಿಕ ಅಸ್ವಸ್ಥನೊಬ್ಬ ಕೆಂಪೇಗೌಡ ಪ್ರತಿಮೆಯನ್ನು ಧ್ವಂಸಗೊಳಸಿದ್ದಾನೆ
ಯರಂಮೋರಪಲ್ಲಿ ಗ್ರಾಮದ ತಿರುಮಲಪ್ಪ ಆಲಿಯಾಸ್ ಗಾಂಧಿ ಎಂಬ ಅಸ್ವಸ್ಥನಿಂದ ಈ ಕೃತ್ಯ ನಡೆದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಆ ಅಸ್ವಸ್ಥನನ್ನು ಹಿಡಿದು ಕಟ್ಟಿಹಾಕಿದ್ದಾರೆ.
ವಿಷಯ ತಿಳಿದ ಪೊಲೀಸರು ಸ್ತಳಕ್ಕೆ ಆಗಮಿಸಿ ಆ ಅಸ್ವಸ್ಥನನ್ನು ಕರೆತಂದು ಆಸ್ಪತ್ರೆಗೆ ಸೇರಿಸಿದರು ಶ್ರೀನಿವಾಸಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.