
ಇಂಗ್ಲೆಂಡ್ ವಿರುದ್ದದ 4ನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ 15 ರನ್ಗಳ ಜಯ ಲಭಿಸಿದೆ. ಅಲ್ಲದೇ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿಯಿರುವಂತೆ ಟೀಂ ಇಂಡಿಯಾ ಸರಣಿಯನ್ನು ವಶಪಡಿಸಿಕೊಂಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಸಂಜು ಸ್ಯಾಮ್ಸನ್ (1),ಅಭಿಷೇಕ್ ಶರ್ಮಾ (29), ತಿಲಕ್ ವರ್ಮಾ (0),ಸೂರ್ಯಕುಮಾರ್ ಯಾದವ್ (0), ಬೇಗನೇ ಔಟ್ ಆದರು. ನಂತರ ಕ್ರೀಸಿಗೆ ಬಂದ ರಿಂಕು ಸಿಂಗ್(30),ಶಿವಂ ದುಬೆ (53),ಹಾರ್ದಿಕ್ ಪಾಂಡ್ಯ (53) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ 20 ಓವರ್ಗಳಿಗೆ 181 ರನ್ ಕಲೆಹಾಕಿತ್ತು. ಇಂಗ್ಲೆಂಡ್ ಪರ ಸಾಕಿಬ್ 3, ಆದಿಲ್ ರಶೀದ್ 1, ಜೇಮಿ ಓವರ್ಟನ್ 2 ವಿಕೆಟ್ ಪಡೆದರು. 182 ರನ್ಗಳ ಗುರಿ ಮುಟ್ಟಲು ಕ್ರೀಸಿಗಿಳಿದ ಫಿಲ್ ಸಾಲ್ಟ್ (23), ಬೆನ್ ಡಕೆಟ್ (39), ಇಬ್ಬರು ಮೊದಲ ವಿಕೆಟ್ಗೆ 62 ರನ್ಗಳ ಜೊತೆಯಾಟ ಆಡಿ ತಂಡಕ್ಕೆ ಮೊದಲ ಬುನಾದಿ ಹಾಕಿದರು. 7 ಓವರ್ ನೊಳಗೆ ಈ ಇಬ್ಬರು ಓಪನಿಂಗ್ ಬ್ಯಾಟ್ಸ್ಮನ್ ಔಟಾಗುತ್ತಿದ್ದಂತೆ ಗುರಿ ಮುಟ್ಟುವ ಜವಾಬ್ದಾರಿ ಮಧ್ಯಮ ಕ್ರಮಾಂಕದ ಮೇಲೆ ಬಿತ್ತು. ನಾಯಕ ಜೋಸ್ ಬಟ್ಲರ್ ಕ್ರೀಸಿಗೆ ಬಂದಷ್ಟೇ ವೇಗವಾಗಿ ವಾಪಸ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಹ್ಯಾರಿ ಬ್ರೂಕ್ ಒಬ್ಬರೇ ಏಕಾಂಗಿಯಾಗಿ (51) ಹೋರಾಟ ಮಾಡಿದರಾದರೂ ತಂಡವನ್ನ ಗೆಲುವಿನ ದಡ ಸೇರಿಸಲಾಗಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡ 19.4 ಓವರ್ಗಳಲ್ಲಿ 166 ರನ್ಗಳಿಗೆ ಅಲೌಟ್ ಆಯಿತ್ತು. ಭಾರತ ಪರ ವರುಣ್ ಚಕ್ರವರ್ತಿ 2, ರವಿ ಬಿಷ್ಣೋಯ್ 3, ಅರ್ಷದೀಪ್ ಸಿಂಗ್ 1 ಹಾಗೂ ಹರ್ಷಿತ್ ರಾಣಾ 3 ವಿಕೆಟ್ ಪಡೆದರು.

ಭಾರತಕ್ಕೆ ಪ್ಲಸ್ ಪಾಯಿಂಟ್ ಆದ ಶಿವಂ ದುಬೆ ಇಂಜುರಿ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಅವಕಾಶ ಪಡೆದ ಟೀಂ ಇಂಡಿಯಾಗೆ ಆಸರೆಯಾಗಿದ್ದು ಶಿವಂ ದುಬೆ 34 ಎಸೆತಗಳಲ್ಲಿ 53 ರನ್ ಗಳಿಸುವ ಮೂಲಕ ಭಾರತವನ್ನ 150 ಗಡಿ ದಾಟುವಂತೆ ಮಾಡಿದರು. ದುಬೆ ಇನ್ನಿಂಗ್ಸ್ ಕೊನೆ ಓವರ್ನಲ್ಲಿ ಬ್ಯಾಟಿಂಗ್ ಮಾಡಬೇಕಾದರೆ ಇಂಜುರಿಗೆ ಒಳಗಾದರು. ನಂತರ ದುಬೆ ಫೀಲ್ಡ್ಗಿಳಿಯಲು ಆಗದ ಹಿನ್ನಲೆಯಲ್ಲಿ ಭಾರತ ಮ್ಯಾಚ್ ರೆಫರಿಯಿಂದ ಬದಲಿ ಆಟಗಾರನಿಗೆ ಮನವಿ ಸಲ್ಲಿಸಿತ್ತು.ನಂತರ ಆಡುವ 11ರ ಬಳಗದಲ್ಲಿ ಅವಕಾಶ ಪಡೆದ ವೇಗಿ ಹರ್ಷಿತ್ ರಾಣಾ ತಮ್ಮ ಬೌಲಿಂಗ್ ಕೈಚಳಕ ತೋರಿಸಿದರು. 4 ಓವರ್ ಬೌಲಿಂಗ್ ಮಾಡಿ 33 ರನ್ ನೀಡಿ ಮುಖ್ಯವಾಗಿ ಇಂಗ್ಲೆಂಡ್ ತಂಡದ ಮೂವರು ಬ್ಯಾಟ್ಸ್ಮನ್ಗಳನ್ನ ಔಟ್ ಮಾಡಿದರು. ಇದು ಪಂದ್ಯದಲ್ಲಿ ಭಾರತಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತ್ತು.
