
ಚಾಂಪಿಯನ್ಸ್ ಟ್ರೋಫಿ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ದ 44 ರನ್ಗಳ ರೋಚಕ ಜಯ ಗಳಿಸಿ ಲೀಗ್ ಹಂತದಲ್ಲಿ ಅಜೇಯವಾಗಿ ಸೆಮಿಫೈನಲ್ ಹಂತಕ್ಕೆ ಎಂಟ್ರಿ ಕೊಟ್ಟಿದೆ. ಟಾಸ್ ಗೆದ್ದು ಫೀಲ್ಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಭಾರತ ತಂಡವನ್ನು 249 ರನ್ಗಳಿಗೆ ಕಟ್ಟಿ ಹಾಕಿತ್ತು. ಭಾರತ ಪರ ರೋಹಿತ್ ಶರ್ಮಾ (15), ಶುಭಮಾನ್ ಗಿಲ್ (2೦. ವಿರಾಟ್ ಕೊಹ್ಲಿ (11), ಶ್ರೇಯಸ್ ಅಯ್ಯರ್ (79), ಅಕ್ಷರ್ ಪಟೇಲ್ (42), ಕೆಎಲ್ ರಾಹುಲ್ (23), ಹಾರ್ದಿಕ್ ಪಾಂಡ್ಯ (45), ರವೀಂದ್ರ ಜಡೇಜಾ (16) ಬ್ಯಾಟಿಂಗ್ನಲ್ಲಿ ಉಪಯುಕ್ತ ಕಾಣಿಕೆ ನೀಡಿದರು. ಬೌಲಿಂಗ್ನಲ್ಲಿ ಕಿವೀಸ್ ಪರ ಮ್ಯಾಟ್ ಹೆನ್ರಿ 5 ವಿಕೆಟ್ ಪಡೆದು ಮಿಂಚಿದರು. 250 ರನ್ಗಳ ಗುರಿ ಬೆನ್ನತ್ತಿದ ಕಿವೀಸ್ ಬ್ಯಾಟರ್ಗಳ ವಿಫಲದಿಂದ 205 ರನ್ಗಳಿಗೆ ಅಲೌಟ್ ಆಯಿತ್ತು. ಕೇನ್ ವಿಲಿಯಮ್ಸನ್ ಮಾತ್ರ (81) ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಕಿವೀಸ್ ಬ್ಯಾಟರ್ಗಳಿಗೆ ಕಡಿವಾಣ ಹಾಕಿದ ಸ್ಪಿನ್ನರ್ ವರುಣ್ ಚಕ್ರವರ್ತಿ 5 ವಿಕೆಟ್ ಪಡೆದು ತಂಡದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು..

ಅಭಿಷೇಕ್. ಎಸ್