
ರಾಜ್ಯದಲ್ಲಿ ಇಲ್ಲಿಯವರೆಗೆ ಚಿರತೆ ಓಡಾಟದ ಸುದ್ದಿಯಾಗಿತ್ತು ಈಗ ಕರಡಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಎಂಬ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದೆ. ಕಳೆದ ಎರಡು ದಿನಗಳ ಹಿಂದೆ ಪಕ್ಕದ ಗ್ರಾಮದ ಹೆಮ್ಮೆಹಟ್ಟಿಯ ಆನಂದಪ್ಪ (65)ಎಂಬ ವೃದ್ದನ ಮೇಲೆ ದಾಳಿ ಮಾಡಿದ ಕರಡಿ.
ಒಂದು ವಾರದಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕರಡಿ ಓಡಾಡುತ್ತಿರುವುದ ಮೂಲಗಳಿಂದ ತಿಳಿದು ಬಂದಿದೆ. ನೆನ್ನೆ ಸಂಜೆಯಷ್ಟೇ ತೋಟಗಳಿಗೆ ನುಗ್ಗಿದ ಕರಡಿಗಳು. ಕರಡಿಗಳ ಓಡಾಟದ ಚಲನವಲನಗಳು ಸಿಸಿಟಿವಿ ಮತ್ತು ಸ್ಥಳೀಯರ ಮೊಬೈಲ್ನಲ್ಲಿ ಸೆರೆಸಿಕ್ಕಿವೆ.ದೇವಸ್ಥಾನ ಮತ್ತು ಮನೆಗಳ ಮುಂದೆಯೂ ಕರಡಿ ಓಡಾಟ ಇದರಿಂದ ಸ್ತಳೀಯರು ಮತ್ತು ಅಕ್ಕಪಕ್ಕದ ಗ್ರಾಮಸ್ಥರು ಭಯಗೊಂಡಿದ್ದಾರೆ. ಇಷ್ಟಾದರೂ ಅರಣ್ಯ ಇಲಾಖೆಯವರು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ