
19 ದಿನಗಳ ಯುದ್ದ, ಪ್ರಶಸ್ತಿಗಾಗಿ 8 ತಂಡಗಳ ಹೋರಾಟ, ಹೋರಾಟದಲ್ಲಿ ಸೋಲಿಲ್ಲದ ಸರದಾರನ್ನಾಗಿ ಗೆದ್ದ ಭಾರತ. ಇದು ಚಾಂಪಿಯನ್ಸ್ ಟ್ರೋಫಿ 2025 ಟೂರ್ನಿಯಲ್ಲಿ ಭಾರತದ ಹೊಸ ಸಾಧನೆ. ನ್ಯೂಜೆಲೆಂಡ್ ವಿರುದ್ದ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ಗಳ ಭರ್ಜರಿ ಜಯ ಗಳಿಸಿ ಚಾಂಪಿಯನ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಎಂದಿನಂತೆ ಟಾಸ್ ಸೋತ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ಅವಕಾಶ ಪಡೆದರು. ದೊಡ್ಡ ಮೊತ್ತ ಪೇರಿಸುವ ಲೆಕ್ಕಚಾರದಲ್ಲಿ ಕಣಕ್ಕಿಳಿದ ನ್ಯೂಜಿಲೆಂಡ್ ಮೊದಲ ವಿಕೆಟ್ಗೆ 57 ರನ್ಗಳ ಜೊತೆಯಾಟ ಮೂಡಿಬಂತು. ರಚಿನ್ ರವೀಂದ್ರ(37), ವಿಲ್ ಯಂಗ್(15), ಕೇನ್ ವಿಲಿಯಮ್ಸನ್ (11), ಬೇಗನೇ ಔಟ್ ಆಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಆದರೆ ಕ್ರೀಸಿನಲ್ಲಿ ಭದ್ರವಾಗಿ ನಿಂತ ಡ್ಯಾರಿ ಮಿಚೆಲ್ (63) ಭಾರತ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಇವರಿಗೆ ಬ್ರೇಸ್ವೆಲ್(53) ಹಾಗೂ ಗ್ಲೇನ್ ಫೀಲಿಪ್ಸ್ (34 ಸಾಥ್ ಕೊಟ್ಟರು. ಅಂತಿಮವಾಗಿ 50 ಓವರ್ಗಳಿಗೆ ನ್ಯೂಜಿಲೆಂಡ್ ತಂಡ 251 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು. ಭಾರತದ ಪರ ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ 2, ಕುಲ್ದೀಪ್ ಯಾದವ್ 2, ರವೀಂದ್ರ ಜಡೇಜಾ 1 ವಿಕೆಟ್ ಪಡೆದುಕೊಂಡರು.
ಭಾರತಕ್ಕೆ 252 ರನ್ಗಳ ಗುರಿ

ನ್ಯೂಜಿಲೆಂಡ್ ತಂಡವನ್ನು 251 ರನ್ಗಳಿಗೆ ಕಟ್ಟಿ ಹಾಕಿದ ಭಾರತ ತಂಡ 252 ರನ್ಗಳ ಗುರಿ ಪಡೆಯಿತು. ನಾಯಕ ರೋಹಿತ್ ಶರ್ಮಾ ( 76), ಶುಭ್ಮನ್ ಗಿಲ್ (31), ಮೊದಲ ವಿಕೆಟ್ಗೆ 105 ರನ್ಗಳ ಜೊತೆಯಾಟ ಆಡಿದರು. ಗಿಲ್ ಔಟ್ ಬಳಿಕ ಕ್ರೀಸಿಗಿಳಿದ ವಿರಾಟ್ ಕೊಹ್ಲಿ (1) ಬಂದಷ್ಟೇ ವೇಗ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ವಿರಾಟ್ ಔಟ್ ಆಗುತ್ತಿದ್ದಂತೆ ಸ್ಟೇಡಿಯಂನಲ್ಲಿ ಅಭಿಮಾನಿಗಳು ಮೌನಕ್ಕೆ ಶರಣಾದರು. ಆದರೆ ಒಂದು ಕಡೆ ನಾಯಕ ರೋಹಿತ್ ಶರ್ಮಾ ತಾಳ್ಮೆಯ ಆಟವಾಡುತ್ತಿದ್ದಾಗ ರಚಿನ್ ರವೀಂದ್ರ ಬೌಲಿಂಗ್ನಲ್ಲಿ ದೊಡ್ಡ ಹೊಡೆತ ಹೊಡೆಯಲು ಹೋಗಿ ವಿಕೆಟ್ ಕೈ ಚೆಲ್ಲಿದರು. ನಂತರ ಶ್ರೇಯಸ್ ಅಯ್ಯರ್ (48) ಹಾಗೂ ಅಕ್ಷರ್ ಪಟೇಲ್ (29) 61 ರನ್ಗಳ ಜೊತೆಯಾಟ ಆಡಿ ಭಾರತವನ್ನು ಗೆಲ್ಲುವಿನ ದಡದತ್ತ ಕರೆದೊಯ್ದರು. ಆದರೆ ಮಿಚೆಲ್ ಸ್ನಾಂಟ್ನರ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತ ಹೊಡೆಯಲು ಹೋಗಿ ಅಯ್ಯರ್ ರಚಿನ್ಗೆ ಕ್ಯಾಚ್ ನೀಡಿದರು. ಆಗ ಭಾರತ ಗುರಿ ಇನ್ನೂ ದೂರದಲ್ಲಿತ್ತು. ಅಕ್ಷರ್ ಪಟೇಲ್ಗೆ ಜೊತಾಯಾದ ಕರ್ನಾಟಕದ ಕೆಎಲ್ ರಾಹುಲ್ ತಾಳ್ಮೆಯಿಂದ ಯಾವುದೇ ಅಪಾಯಕ್ಕೆ ದಾರಿ ಮಾಡಿಕೊಡದೇ (34)ರನ್ ಗಳಿಸಿ ಕೊನೆಯವರೆಗೆ ನಾಟೌಟ್ ಆಗಿ ಉಳಿದರು. ಅಂತಿಮದಲ್ಲಿ ಹಾರ್ದಿಕ್ ಪಾಂಡ್ಯ(18), ಹಾಗೂ ರವೀಂದ್ರ ಜಡೇಜಾ (9) ಭಾರತದ ಗೆಲುವಿಗೆ ಕಾರಣರಾದರು.
ಅಭಿಷೇಕ್.ಎಸ್