
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ ನಟ ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲು ಪೊಲೀಸರು ಎರಡು ವಿಭಿನ್ನ ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಮೊದಲ ಮಾರ್ಗವು ನೈಸ್ ರಸ್ತೆ ಮೂಲಕ ತಮಕೂರು, ಚಿತ್ರದುರ್ಗವನ್ನು ವ್ಯಾಪಿಸಿ ಬಳ್ಳಾರಿಗೆ ತಲುಪುವುದು. ಆದರೆ, ಈ ಮಾರ್ಗದಲ್ಲಿ ದರ್ಶನ್ ಅವರ ಅಭಿಮಾನಿಗಳು ಜಮಾವಣೆಗೊಳ್ಳುವ ಸಾಧ್ಯತೆ ಇರುವುದರಿಂದ, ಎರಡನೇ ಮಾರ್ಗವನ್ನು ಆಯ್ಕೆ ಮಾಡಲಾಗಿದೆ.ಎರಡನೇ ಮಾರ್ಗವು ದೇವನಹಳ್ಳಿ, ಅನಂತಪುರ, ಪೆನುಗೊಂಡ ಮೂಲಕ ಆಂಧ್ರ ಪ್ರದೇಶದ ಮೂಲಕ ಬಳ್ಳಾರಿಗೆ ತಲುಪುವುದು. ಈ ಮಾರ್ಗದಲ್ಲಿ ದರ್ಶನ್ ಅವರ ಅಭಿಮಾನಿಗಳು ಕಡಿಮೆ ಇರುವುದರಿಂದ ಯಾವುದೇ ತೊಂದರೆ ಇಲ್ಲದೆ ಶಿಫ್ಟ್ ಮಾಡಬಹುದೆಂದು ಪೊಲೀಸರು ನಿರ್ಧರಿಸಿದ್ದಾರೆ.ದರ್ಶನ್ ಅವರನ್ನು ಕೆಎ02G3717 ನಂಬರಿನ ನೀಲಿ ಬಣ್ಣದ ಬೂಸೆರೋ ಜೀಪ್ ನಲ್ಲಿ ಬಳ್ಳಾರಿಗೆ ಶಿಪ್ಟ್ ಮಾಡಲಾಗುತ್ತಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಅವರು ಬಳ್ಳಾರಿಗೆ ತಲುಪಲಿದ್ದಾರೆ.