
ಮೈಸೂರು : ಬಿಜೆಪಿ ರಾಜ್ಯ ನಾಯಕರ ವಿರುದ್ದ ಹಗುರವಾಗಿ ಮಾತನಾಡೋ ಯತ್ನಾಳ್ನನ್ನ ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಿಯೋಗದ ಸುದ್ದಿಗೋಷ್ಠಿಯಲ್ಲಿ ರೊಚ್ಚಿಗೆದ್ದ ಕಾರ್ಯಕರ್ತರು, ರಾಜ್ಯದಲ್ಲಿ ಯಡೀಯೂರಪ್ಪ ದುಡಿದು ಪಕ್ಷ ಕಟ್ಟಿದ್ದಾರೆ. ಆದರೆ ಅವರ ವಿರುದ್ದ ಏಕವಚನದಲ್ಲಿ ಯತ್ನಾಳ್ ಮಾತನಾಡುತ್ತಾರೆ.
ಯತ್ನಾಳ್ನಿಂದ ನಮಗೆ ಯಾವುದೆ ಲಾಭ ಇಲ್ಲ ಬದಲಿಗೆ ನಮಗೆ ನಷ್ಟ, ನಮ್ಮ ಹಿಂದುತ್ವಕ್ಕೆ ನಷ್ಟ. ಯತ್ನಾಳ್ ಒಬ್ಬ ಮುಖವಾಡ ಹಾಕಿಕೊಂಡಿರುವ ಹಿಂದೂತ್ವದ ನಾಯಕ. ಹೈಕಮಾಂಡ್ ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟೊ ಕೆಲಸ ಯತ್ನಾಳ್ ಮಾಡುತ್ತಿದ್ದಾರೆ. ಆತನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಬಿಜೆಪಿ ಕಾರ್ಯಕರ್ತರು ಕಿಡಿಕಾಡಿದ್ದಾರೆ.