
ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಮತ್ತೆ ಕಳ್ಳರ ಹಾವಳಿ ಮುಂದುವರೆದಿದ್ದು, ರಾಣೇಬೆನ್ಮೂರು ನಗರದ ಚೆನ್ನೇಶ್ವರ ನಗರದಲ್ಲಿನ ಮಾಜಿ ಸೈನಿಕ ಕುಮಾರಸ್ವಾಮಿ ಯೋಗಿಮಠ ಅವರ ಮನೆಯಲ್ಲಿ ದೊಡ್ಡ ಮಟ್ಟದ ಕಳ್ಳತನ ನಡೆದಿದೆ. ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ 7.20 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣ, ಕ್ಯಾಮೆರಾ, ಮೊಬೈಲ್, ಮತ್ತು ವಾಚ್ ಕದ್ದೊಯ್ದಿದ್ದಾರೆ.
ಇದೊಂದಲ್ಲ, ಚಿದಂಬರ ನಗರದಲ್ಲೂ ಕಳ್ಳತನ ನಡೆದಿರುವುದು ವರದಿಯಾಗಿದೆ. ಇತ್ತೀಚಿಗೆ ರಾಣೇಬೆನ್ನೂರು ನಗರದಲ್ಲಿ ದಿನದ ಹಿಂದೆನೇ ಕಳ್ಳತನಗಳು ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಉಂಟುಮಾಡಿದೆ. ಈ ಸಂಬಂಧ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.