
ಚಿಕ್ಕಮಗಳೂರು : ಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದು, ಧರೆ ಕುಸಿತವಾಗಿದೆ. ಎನ್.ಆರ್.ಪುರ ತಾಲೂಕಿನ ಬನ್ನೂರು ಸಮೀಪದ ಜಕ್ಕಣಕ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಳ್ಳದಲ್ಲಿ ನಿರಂತರ ನೀರು ಹರಿದು ಹಳ್ಳದ ಪಕ್ಕ ಭಾರೀ ಪ್ರಮಾಣದಲ್ಲಿ ಧರೆ ಕುಸಿದಿದ್ದೆ.
ಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದ ಜಕ್ಕಣಕ್ಕಿ ಗ್ರಾಮಕ್ಕೆ ಇರುವ ರಸ್ತೆ ಸಂಪರ್ಕ ಕಟ್ ಆಗುವ ಸಾಧ್ಯತೆ ಇದು, ಸೇತುವೆ ಕಟ್ ಆದರೆ, 15 ಮನೆ, 3 ಎಸ್ಟೇಟ್, ಕಾರ್ಮಿಕರ ಲೈನ್ ಮನೆಗಳಿಗೆ ದಾರಿಯೇ ಇಲ್ಲದಂತಾಗುತ್ತದೆ. ಅಷ್ಟೆ ಅಲ್ಲಾದೆ ಎರಡ್ಮೂರು ವರ್ಷಗಳಿಂದ ನಿರಂತರವಾಗಿ ಭೂಮಿ ಕುಸಿಯುತ್ತಿರುವುದನ್ನು, ಅಧಿಕಾರಿಗಳು, ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ನೋ ಯೂಸ್. ಅಧಿಕಾರಿಗಳು ಬಂದು ನೋಡುತ್ತಾರೆ, ಯಾವುದೇ ಕ್ರಮ ಕೈಗೊಳ್ಳಲ್ಲ ಎಂದು ಅಧಿಕಾರಿಗಳ ವಿರುದ್ಧ ಹಳ್ಳಿಯ ಜನರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ : https://ashwaveega.com/the-death-of-a-government-hospital-doctor/