
ಮೈಸೂರು : ನೆನ್ನೆ ಸುರಿದ ಭಾರಿ ಮಳೆಗೆ ಮೈಸೂರು ತತ್ತರಿಸಿ ಹೋಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಹೌದು ನೆನ್ನೆ ರಾತ್ರಿ ಭಾರಿ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಮಂಡಿ ಮೊಹಲ್ಲಾದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ದಸರಾ ವಸ್ತುಪ್ರದರ್ಶನ ದಲ್ಲಿ ಅಹಾರ ಮಳಿಗೆಗಳು ಧರೆಗುರುಳಿವೆ. ಅಷ್ಟೆ ಅಲ್ಲಾದೆ ಮೇದಾರ ಬ್ಲಾಕ್ ಬಳಿ ಜಲಾವೃತವಾಗಿ ರಸ್ತೆಗಳು ಸಂಪೂರ್ಣ ಕೆಸರುಮಯವಾಗಿದೆ.
ಮತ್ತೊಂದೆಡೆ ರಾತ್ರಿ ಕೆಲಕಾಲ ಮೈಸೂರು-ಕೆ.ಆರ್.ಎಸ್ ಸಂಚಾರ ಬಂದ್ ಮಾಡಲಾಗಿದ್ದು, ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. ಇನ್ನೂ ರಸ್ತೆ ಮೇಲೆ ಮೂರು ಅಡಿ ನೀರು ನಿಂತಿದ್ದು, ಖುದ್ದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಷರೀಫ್ ಅವರು ಪರಿಶೀಲನೆ
ನಡೆಸಿದ್ದು, ಸಮಸ್ಯೆ ಬಗ್ಗೆ ಅರಿಯದೆ ಆಯುಕ್ತ ಚಿಂತಿಸುತ್ತಾ ನಿಂತಿದ್ದಾರೆ.