
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಗುಸು ಗುಸು ಮಧ್ಯೆಯೇ ಸಚಿವ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ತಮ್ಮ ಎದುರಾಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಬೆಳವಣಿಗೆ ಬಗ್ಗೆ ನಾನು ಅನಗತ್ಯವಾಗಿ ಮಾತನಾಡಲು ಹೋಗುವುದಿಲ್ಲ. ಸಂದರ್ಭ ಬಂದಾಗ ಮಾತನಾಡುತ್ತೇನೆ. ಸದ್ಯಕ್ಕೆ ನನ್ನ ಬಳಿ ಯಾವುದೇ ವಿಚಾರವಿಲ್ಲ, ಆದರೆ ಸಂದರ್ಭ ಬಂದಾಗ ನಾನು ಖಂಡಿತಾ ಮಾತನಾಡುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಹೈ ಕಮಾಂಡ್ ವಾರ್ನಿಂಗ್ ನೀಡಿದ ವಿಚಾರವನ್ನುಕೂಡ ತಳ್ಳಿ ಹಾಕಿದರು. ತನಗೆ ಹೈ ಕಮಾಂಡ್ ಯಾವುದೇ ವಾರ್ನಿಂಗ್ ನೀಡಿಲ್ಲ. ಸುಮ್ಮನೇ ಏಕೆ ವಾರ್ನಿಂಗ್ ನೀಡುತ್ತಾರೆ ಎಂದು ಮರುಪ್ರಶ್ನೆ ಮಾಡಿದ್ದಾರೆ. ಇದರ ಜೊತೆಗೆ ಹೈ ಕಮಾಂಡ್ ನಾಯಕರ ಜೊತೆ ಡಿಸಿಎಂ ಡಿ. ಕೆ. ಶಿವಕುಮಾರ್ ಡಿಮ್ಯಾಂಡ್ ಇಟ್ಟಿರುವ ವಿಚಾರ ನನಗೇನು ಗೊತ್ತಿಲ್ಲ. ಏನೇ ಇದ್ದರೂ ಪಕ್ಷ ಹಾಗೂ ಹೈ ಕಮಾಂಡ್ ನಾಯಕರು ನೋಡಿಕೊಳ್ಳುತ್ತಾರೆ. ಈ ವಿಚಾರದಲ್ಲಿ ನಾನು ಯಾವುದೇ ಸ್ವಂತ ನಿರ್ಧಾರ ಅಥವಾ ವ್ಯಯಕ್ತಿಕ ಅಭಿಪ್ರಾಯ ನೀಡಲು ಸಾಧ್ಯವಿಲ್ಲಎಂದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಅಭಿಷೇಕ್.ಎಸ್