
ಅವಕಾಶಗಳು ಬರದೇ ಇದ್ದಾಗ ನಾವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು ಎಂಬುದು ಜಗದ ನಿಯಮ. ಈ ನಿಯಮವನ್ನೇ ಭಾರತ ತಂಡದ ವಿಕೆಟ್ ಕೀಪರ್ ಕೆ ಎಸ್ ಭರತ್ ಮಾಡಿದ್ದಾರೆ. ಕಳೆದ 2-3 ಅವೃತ್ತಿಗಳಲ್ಲಿ ಆರ್ಸಿಬಿ, ಡೆಲ್ಲಿ ತಂಡದಲ್ಲಿ ಆಡಿದ್ದ ಭರತ್, 2025ರ ಐಪಿಎಲ್ನ ಮೆಗಾ ಹರಾಜಿನಲ್ಲಿ ಯಾವ ತಂಡವೂ ಖರೀದಿ ಮಾಡಲಿಲ್ಲ. ಹೀಗಾಗಿ ಕೆಎಸ್ ಭರತ್ ಅವರು 2025ರ ಆವೃತ್ತಿಯಲ್ಲಿ ಅನ್ ಸೋಲ್ಡ್ ಆಗಿ ಉಳಿದರು. ಐಪಿಎಲ್ನಲ್ಲಿ ಸಿಗದ ಅವಕಾಶ ಹಿನ್ನೆಲೆಯಲ್ಲಿ ವಿದೇಶಿ ಲೀಗ್ನತ್ತ ಭರತ್ ಮುಖ ಮಾಡಿದ್ದಾರೆ. ಇಂಗ್ಲೆಂಡ್ನ ಪ್ರತಿಷ್ಠಿತ ಸರ್ರೆ ಚಾಂಪಿಯನ್ಶಿಪ್ನಲ್ಲಿ ಡಲ್ವಿ ಕ್ರಿಕೆಟ್ ಪರ ಆಡಲು ಕೆಎಸ್ ಭರತ್ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಂತೆ ಏಪ್ರಿಲ್ನಲ್ಲಿ ನಡೆಯಲಿರುವ ಟೂರ್ನಿಗಾಗಿ ಇಂಗ್ಲೆಂಡ್ಗೆ ತೆರಳಲಿದ್ದಾರೆ. ಇದೊಂದು ಸ್ಪರ್ಧಾತ್ಮಕ ಕ್ರಿಕೆಟ್ ಆಗಿದ್ದು ಇಲ್ಲಿನ ಪಿಚ್ಗಳು ಭಾರತದ ಪಿಚ್ಗಳಿಗಿಂತ ಹೆಚ್ಚು ವಿಭಿನ್ನವಾಗಿರುತ್ತವೆ. ಇಂತಹ ಪಿಚ್ಗಳಲ್ಲಿ ಭರತ್ ಅವರು ತಮ್ಮ ಬ್ಯಾಟಿಂಗ್ ತಂತ್ರದಲ್ಲಿ ಬದಲಾವಣೆ ಕಂಡು ಮತ್ತೊಮ್ಮೆ ಭಾರತದ ಬಾಗಿಲು ತಟ್ಟುವ ಇರಾದೆಯಲ್ಲಿದ್ದಾರೆ.

ಅಭಿಷೇಕ್.ಎಸ್