
ಖೋ ಖೋ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಜ್ಯದ ಗೌತಮ್, ಚೈತ್ರಾಗೆ ಸಿಎಂ ಸಿದ್ದರಾಮಯ್ಯ ಬಹುಮಾನ ಘೋಷಿಸಿದ್ದಾರೆ. ಪುರುಷ ತಂಡದಲ್ಲಿ ಗೌತಮ್ ಹಾಗೂ ಮಹಿಳಾ ತಂಡದಲ್ಲಿ ಚೈತ್ರಾ ಖೋ ಖೋ ವಿಶ್ವಕಪ್ ಗೆಲ್ಲುವಲ್ಲಿ ಭಾರತ ತಂಡಕ್ಕೆ ತಮ್ಮದೇ ಕೊಡುಗೆ ನೀಡಿದ್ದರು. ಗೌತಮ್ ಮಂಡ್ಯ ಜಿಲ್ಲೆಯ ಡಿ.ಮಲ್ಲಿಗೆರೆ ಗ್ರಾಮಕ್ಕೆ ಸೇರಿದವರು ಆಗಿದ್ದು, ಚೈತ್ರಾ ಮೈಸೂರಿನ ಟೀ ನರಸೀಪುರದ ಕುರಬೂರಿನವರಾಗಿದ್ದಾರೆ. ಈ ಇಬ್ಬರು ಆಟಗಾರರನ್ನು ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಸನ್ಮಾನಿಸಿ ಗೌರವಿಸಿದರು. ಇಬ್ಬರೂ ಆಟಗಾರರಿಗೂ ತಲಾ 5 ಲಕ್ಷ ರೂ. ಬಹಮಾನಗಳನ್ನೂ ಸಿಎಂ ಘೋಷಿಸಿದರು. ಈ ವೇಳೆ ಕೃಷಿ ಸಚಿವ ಚಲುವರಾಯಸ್ವಾಮಿ, ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು. ಖೋ ಖೋ ಫೈನಾಲ್ ಪಂದ್ಯದಲ್ಲಿ ಭಾರತ ಪುರುಷ ಹಾಗೂ ಮಹಿಳೆ ತಂಡ ಕ್ರಮವಾಗಿ ನೇಪಾಳ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು.
