
pratap simha open challenges
(ಅಶ್ವವೇಗ) Ashwaveega News 24×7 ಜು.06: ಆರ್ ಎಸ್ ಎಸ್ ಬ್ಯಾನ್ ಮಾಡುತ್ತೇವೆ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರಕ್ಕೆ ಇಂದು ಮೈಸೂರಿನಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಪೈಲ್ಸ್ ಪ್ರಿಯಾಂಕ ಕೂಗು ಮಾರಿ ಖರ್ಗೆ. ಆರ್ ಎಸ್ ಎಸ್ ಬ್ಯಾನ್ ಮಾಡ್ತೀರಾ ? ನೀವು ಯಾರ ಮಗಳು ಹೆಸರು ಇಟ್ಕೊಂಡಿದ್ದರಲ್ಲಾ ಅವರ ಕೈಯಲ್ಲೇ ಆಗಿಲ್ಲ.
ಬ್ಯಾನ್ ಮಾಡಿದರೇ ಅಧಿಕಾರ ಕಳೆದುಕೊಂಡರು. ನೆಹರು ಕೂಡ ಬ್ಯಾನ್ ಮಾಡಿ ನಂತರ ಬ್ಯಾನ್ ವಾಪಸ್ಸು ತೆಗೆದುಕೊಳ್ಳುವ ಅನಿವಾರ್ಯತೆ ಬಂತು.
ನೆಹರು ಅವರ ಮರಿ ಮಗಳ ಹೆಸರು ಇಟ್ಕೊಂಡು ನೀವು ಏನು ಮಾಡಲು ಸಾಧ್ಯವಿಲ್ಲ.
ನಿಮಗೆ ನಿಮ್ಮ ಹೆಸರಿನಲ್ಲೂ ಸ್ವಂತಿಕೆ ಇಲ್ಲ. ಐಟಿ ಬಿಟಿ ಸಚಿವರಾಗಿ ನಿಮ್ಮ ಸಾಧನೆ ಹೇಳಿ ?. ಬೇರೆ ರಾಜ್ಯಗಳಿಗೆ ಕಂಪನಿಗಳು ಯಾಕೆ ಹೋಗುತ್ತಿದೆ ಹೇಳಿ ?,. ಸಂವಿಧಾನವನ್ನು ಆರ್ ಎಸ್ ಎಸ್ ರಕ್ಷಣೆ ಮಾಡುತ್ತಿದೆ. ಕಲಬುರುಗಿಯಲ್ಲಿ ಅವ್ಯವಸ್ಥೆ ನೋಡಿ ಮೊದಲು. ಒಂದು ಗಂಟೆ ಮಳೆ ಬಂದರೆ ರಸ್ತೆಯಲ್ಲಾ ಜಲಾನಯನವಾಗುತ್ತದೆ. ನಿಮ್ಮ ಅಪ್ಪ ದೊಡ್ಡ ದೊಡ್ಡ ನಾಯಕರನ್ನು ಬಲಿ ಕೊಟ್ಟು ಸಿಎಂ ಸ್ಥಾನ ಬಿಟ್ಟುಕೊಟ್ಟು ನಿಮ್ಮನ್ನ ಮಂತ್ರಿ ಮಾಡಿದ್ದಾರೆ. ಮೋದಿ ಆರ್ ಎಸ್ ಎಸ್ ಬಗ್ಗೆ ದಿನ ಮಾತನಾಡುತ್ತೀರಾ.?. ಇದೇ ರೀತಿ ಕೂಗು ಮಾರಿ ತರ ಮಾತನಾಡುತ್ತಿದ್ದರೆ ನಿಮಗೆ ಒಳ್ಳೆಯದು ಆಗಲ್ಲ.
ನಿಮ್ಮಪ್ಪನ್ನನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಆರ್ ಎಸ್ ಎಸ್ ಗೆ ಬೈದರೆ ಅಧಿಕಾರ ಸಿಗಲ್ಲ. ಪ್ರತಿ ನಿತ್ಯ ಇಲಾಖೆ ವಿಚಾರವನ್ನ ಮಾತನಾಡಿ. ಸಂತೋಷ ಲಾಡ್ ಸಹ ಮೇಧಾವಿ ರೀತಿ ಮಾತನಾಡುತ್ತೀರಾ. ಮೋದಿಗೆ ಪಾಠ ಮಾಡುತ್ತೀರಾ ?
ಈ ದೇಶದ ಅರ್ಥ ವ್ಯವಸ್ಥೆಯನ್ನು ನಿರ್ವಹಣೆ ಮಾಡುವುದು ಸಂಡೂರು ಮೈನ್ಸ್ ನಿಂದ ಕದ್ದು ಮಾರಾಟ ಮಾಡಿದಿರಲ್ಲಾ ಆ ರೀತಿ ನಾ ?.
ಒಂದೇ ಪರ್ಮಿಟ್ನಲ್ಲಿ ಹತ್ತತ್ತು ಲಾರಿ ಸಾಗಿಸುತ್ತೀರಲ್ಲ ಆ ರೀತಿನಾ ?. ಲಾಡ್ ಅವರೇ ಅರ್ಥ ವ್ಯವಸ್ಥೆಯ ಬಗ್ಗೆ ಕನಿಷ್ಟ ಜ್ಞಾನ ಇಲ್ಲ ನಿಮಗೆ. ಒಂದು ಲೈಸೆನ್ಸ್ ನಲ್ಲಿ ನೂರಾರು ಲಾರಿ ಓಡಿಸಿದ್ರಲ್ಲಾ ಲಾಡ್ ಅವರೇ ಆ ರೀತಿ ಅಲ್ಲ ಅಧಿಕಾರ ನಡೆಸುವುದು.
ಪ್ರತಿನಿತ್ಯ ಕಾ ಕಾ ಅಂತೀರಲ್ಲಾ ನಿಮ್ಮ ಜಿಲ್ಲೆಯಲ್ಲಿ ಕಾಗೆಗಳು ಇಲ್ವಾ ?ನಿಮ್ಮ ರಾಜ್ಯದ ಇಎಸ್ಐ ಆಸ್ಪತ್ರೆಯ ಅವ್ಯವಸ್ಥೆಯನ್ನ ನೋಡಿದ್ದೀರಾ ಲಾಡ್ ಅವರೇ ?. ಮೈನಿಂಗ್ ದುಡ್ಡಿನಿಂದ 5 ಸಾವಿರ 10 ಸಾವಿರ ಕೊಟ್ಟು ತಾಳಿ ಕಟ್ಟಿಸಿದ್ದಾರೆ. ನೀವು ಪ್ರಿಯಾಂಕ್ ಖರ್ಗೆ ಬಹಿರಂಗ ಚರ್ಚೆಗೆ ಬನ್ನಿ ನಿಮ್ಮನ್ನು ಸೋಲಿಸುತ್ತೇನೆ. ಪಾಯಿಂಟು ಪಾಯಿಂಟು ಚರ್ಚೆ ಮಾಡುತ್ತೇನೆ.ಯಾವ ಚಾಲನ್ ನಲ್ಲಿಯಾದರೂ ಸರಿ ಅಥವಾ ಬಹಿರಂಗಿಯೂ ಸರಿ ಚರ್ಚೆಗೆ ಬನ್ನಿ ಎಂದು ಸಂತೋಷ್ ಲಾಡ್ ಪ್ರಿಯಾಂಕ್ ಖರ್ಗೆ ಅವರನ್ನು ಬಹಿರಂಗ ಚರ್ಚಗೆ ಆಹ್ವಾನಿಸಿದ್ದಾರೆ.