
ಪಂಜಾಬ್ ತಂಡ ವಿರುದ್ದ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ದಿನದಲೇ ಭರ್ಜರಿ ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮಯಾಂಕ್ ಅಗರ್ವಾಲ್ ಅವರ ನಿರ್ಧಾರವನ್ನು ಬೌಲರ್ಗಳು ಹುಸಿ ಮಾಡಲಿಲ್ಲ. ದೊಡ್ಡ ಮೊತ್ತ ಪೇರಿಸುವ ನಿಟ್ಟಿನಲ್ಲಿ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ ತಂಡ ಕೇವಲ 55 ರನ್ಗಳಿಗೆ ಅಲೌಟ್ ಆಯಿತ್ತು. ವೈಶಾಕ್ ವಿಜಯ್ ಕುಮಾರ್, ಪ್ರಸಿದ್ ಕೃಷ್ಣ ರಾಜ್ಯದ ಪರ ಉತ್ತಮ ಪ್ರದರ್ಶನ ನೀಡಿದರು. ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿ ಬ್ಯಾಟಿಂಗ್ಗೆ ಇಳಿದ ಕರ್ನಾಟಕ ತಂಡ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ ಒಟ್ಟು144 ರನ್ಗಳ ಮುನ್ನಡೆ ಸಾಧಿಸಿದೆ. ಎಸ್ ರವಿಚಂದ್ರನ್ 83 ರನ್ ಗಳಿಸಿ ಅಭಿನವ್ ಮನೋಹರ್ ಜೊತೆಯಲ್ಲಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
