
ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಕಳಪೆ ಪ್ರದರ್ಶ ನೀಡಿದಕ್ಕೆ ವೇಗಿ ಸಿರಾಜ್ರನ್ನು ತಂಡದಿಂದ ಕೈ ಬಿಡಲಾಗಿತ್ತು. ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಸರಣಿ ಹಾಗೂ ಮುಂದಿನ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಸಿರಾಜ್ ಆಯ್ಕೆ ಆಗುವಲ್ಲಿ ವಿಫಲರಾಗಿದ್ದರು. ಆದ್ರೆ ಪ್ರಸ್ತುತ ರಣಜಿಯಲ್ಲಿ ಹೈದರಾಬಾದ್ ಪರವಾಗಿ ಸಿರಾಜ್ ಅದ್ಬುತ ಬೌಲಿಂಗ್ ಮಾಡುತ್ತಿದ್ದು , ಉತ್ತಮ ಲೈನ್ ಅಂಡ್ ಲೆಂಥ್ ಮೇಲೆ ಬೌಲಿಂಗ್ ಮಾಡುತ್ತಿದ್ದು , ವಿದರ್ಭ ವಿರುದ್ದ ನಡೆಯುತ್ತಿರುವ ಪಂದ್ಯವೇ ಇದಕ್ಕೆ ಉತ್ತಮ ಉದಾಹರಣೆಯಾಗಿದೆ.

ಈ ಪಂದ್ಯದಲ್ಲಿ ಸಿರಾಜ್ 18 ಓವರ್ ಬೌಲಿಂಗ್ ಮಾಡಿದರು ಇದರಲ್ಲಿ 7 ಮೇಡನ್ ಓವರ್, 87 ಡಾಟ್ ಬಾಲ್ಸ್ ಹಾಗೂ ಒಂದು ವಿಕೆಟ್ ಇದ್ದು ನಾನೇನು ಎಂಬುದು ತೋರಿಸಿಕೊಟ್ಟಿದ್ದಾರೆ. ಸಿರಾಜ್ ಎಸೆದ 87 ಎಸೆತಗಳಲ್ಲಿ ವಿಧರ್ಭ ತಂಡಕ್ಕೆ ಒಂದೇ ಒಂದು ರನ್ ಗಳಿಸಲು ಸಾಧ್ಯವಾಗಲಿಲ್ಲ. ಅಷ್ಟರಮಟ್ಟಿಗೆ ಸಿರಾಜ್ ತಮ್ಮ ಲಯದಲ್ಲಿ ಬೌಲಿಂಗ್ ಮಾಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದರ ಸಲುವಾಗಿ ಸಿರಾಜ್ ಹಳೆ ಚೆಂಡಿನಲ್ಲಿ ಅಷ್ಟು ಪರಿಣಾಮಕಾರಿಯಲ್ಲ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದರು. ಆದರೆ ಪ್ರಸ್ತುತ ಸಿರಾಜ್ ತಮ್ಮ ಬೌಲಿಂಗ್ ಮೂಲಕವೇ ನಾಯಕನಿಗೆ ಉತ್ತರ ನೀಡಿದ್ದಾರೆ.

ಅಭಿಷೇಕ್ .ಎಸ್