
ಬೆಂಗಳೂರು: ಬೆಂಗಳೂರಿನ ಮಜೆಸ್ಟಿಕ್ ರೈಲು ನಿಲ್ದಾಣ ಪಕ್ಕದಲ್ಲಿ ಅಪರೂಪದ ಎರಡು ತಲೆ ಹಾವು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮತ್ತು ಆಶ್ಚರ್ಯ ಮೂಡಿಸಿದೆ. ಹಾವು ಕಾಣಿಸಿಕೊಂಡ ಸ್ಥಳದಲ್ಲಿ ಆಟೋ ಡ್ರೈವರ್ಗಳು ಈ ಹಾವನ್ನು ಕಂಡು ಕೂಡಲೇ ವನ್ಯಜೀವಿ ಸಂರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಎರಡು ತಲೆ ಹಾವು, ಜನಪ್ರಿಯವಾಗಿ ಮಣ್ಣವು ಎಂದು ಕರೆಯಲ್ಪಡುವ ಈ ಹಾವು ಹಲವಾರು ಜನರಲ್ಲಿ ಅದೃಷ್ಟದ ಸಂಕೇತ ಎನ್ನುವ ನಂಬಿಕೆಯನ್ನು ಹುಟ್ಟಿಸಿದೆ. ಈ ಕಾರಣದಿಂದ, ಇಂತಹ ಹಾವಿನ ಕಳ್ಳ ಸಾಗಣಿಕೆ ಹೆಚ್ಚು ನಡೆದಿರುವ ವಿಷಯ ತಿಳಿದುಬಂದಿದೆ.
ಆಟೋ ಚಾಲಕರು, ಹಾವು ಕಾಣಿಸಿದ ತಕ್ಷಣ ರಕ್ಷಣೆ ಮಾಡಬೇಕೆಂದು ಪ್ರಾಣಿ ಕಲ್ಯಾಣ ಮತ್ತು ವನ್ಯಜೀವಿ ಸಂರಕ್ಷಕರಿಗೆ ಮನವಿ ಮಾಡಿದ್ದಾರೆ. ಈ ಕುರಿತು ಸ್ಪಂದಿಸಿದ ವನ್ಯಜೀವಿ ಸಂರಕ್ಷಕ ಪ್ರಸನ್ನ ಕುಮಾರ್, ಹಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿ, ಸೂಕ್ತವಾದ ಆವಾಸ ಸ್ಥಳದಲ್ಲಿ ಬಿಡುಗಡೆ ಮಾಡಿದ್ದಾರೆ.