
ಚಾಂಪಿಯನ್ಸ್ ಟೂರ್ನಿಯಲ್ಲಿ ಭಾರತ ತಂಡದ ಭಾಗವಾಗಿರುವ ರಿಷಬ್ ಪಂತ್ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇದರ ನಡುವೆ ಸ್ಟಾರ್ ಬ್ಯಾಟ್ಸ್ಮನ್ ಪಂತ್ಗೆ ಒಳ್ಳೆ ಸುದ್ದಿ ಲಭಿಸಿದೆ. ಅದೇನಂದರೆ ಪ್ರತಿಷ್ಠಿತ 2025ರ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ವರ್ಷದ ಕಮ್ ಬ್ಯಾಕ್ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ರಿಷಬ್ ಜೊತೆಗೆ ಇನ್ನು 6 ಆಟಗಾರರನ್ನು ನಾಮನಿರ್ದೇಶನ ಮಾಡಲಾಗಿದೆ. ರಿಷಬ್ ಪಂತ್ಗೂ ಮುನ್ನ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು 2020ರಲ್ಲಿ ನಾಮನಿರ್ದೇಶನ ಮಾಡಲಾಗಿತ್ತು. ರಿಷಬ್ ಪಂತ್ 2022ರ ಡಿಸೆಂಬರ್ನಲ್ಲಿ ಕಾರು ಅಪಘಾತಕ್ಕೀಡಾಗಿದ್ದರು. ಆ ವೇಳೆಯಲ್ಲಿ ಪಂತ್ಗೆ ತಲೆ. ಮೊಣಕಾಲು ಹಾಗೂ ಬೆನ್ನಿಗೆ ಗಂಭೀರ ಗಾಯ ಆಗಿದ್ದವು. ಗಾಯದ ತೀವ್ರತೆಗೆ ಸುಮಾರು 15 ತಿಂಗಳು ಕ್ರಿಕೆಟ್ನಿಂದ ಪಂತ್ ದೂರ ಉಳಿದಿದ್ದರು. ನಂತರ ಅವರ ಚೇತರಿಕೆ ನೋಡಿ ಕ್ರಿಕೆಟ್ ಆಡೋದು ಅನುಮಾನ ಎಂದೇ ಹೇಳಲಾಗುತಿತ್ತು. ಆದರೆ ಪಂತ್ ಕಠಿಣ ಅಭ್ಯಾಸ ಹಾಗೂ ಪರಿಶ್ರಮದಿಂದ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನ ಆಗಿರುವುದು ಭಾರತೀಯರಲ್ಲಿ ಸಂತಸ ಮೂಡಿಸಿದೆ.

ಅಭಿಷೇಕ್.ಎಸ್