
ಸಿಎಂ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ. ಎಂದಿನಂತೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ತಮ್ಮ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುವುದರೊಂದಿಗೆ ಅಭಿವೃದ್ಧಿ ಕಾರ್ಯಗಳಿಗೂ ಸಹ ಪ್ರಾಮುಖ್ಯತೆ ನೀಡುವ ಅನಿವಾರ್ಯತೆಯ ಸಿಎಂ ಸಿದ್ದರಾಮಯ್ಯ ಅವರ ಮೇಲಿದೆ. ಒಂದು ಕಡೆ ಪ್ರತಿಪಕ್ಷಗಳು ಗ್ಯಾರಂಟಿ ಯೋಜನೆಗಳಿಂದ ಅಭವೃದ್ಧಿ ಕುಂಠಿತವಾಗಿದೆ. ರಾಜ್ಯ ಸರ್ಕಾರ ದಿವಾಳಿಯೇಳಲಿದೆ ಎಂದು ಆರೋಪಿಸುತ್ತಿರುವ ಮಧ್ಯೆಯೇ ಸಿಎಂ ಸಿದ್ದರಾಮಯ್ಯ ಅವರೀಂದ ಮಂಡಿಸಲ್ಪಡುತ್ತಿರುವ ಈ ಬಜೆಟ್ ಹಲವು ಕುತೂಹಲಗಳಿಗೆ ಕಾರಣವಅಗಿದೆ.
ಏನಿರಲಿದೆ?
ಶಿಕ್ಷಣ ಕ್ಷೇತ್ರಕ್ಕೆ ಬಲವರ್ಧನೆ, ಗಾಮೀಣ ಪ್ರದೇಶಗಳಿಗೆ ಉತ್ತಮ ಸಾರಿಗೆ ಸಂಪರ್ಕ, ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಯನ್ನಾಗಿ ಮಾಡುವುದು, ಮಕ್ಕಳಬ ಮತ್ತು ವಯೋ ವೃದ್ದರ ಆರೋಗ್ಯಕ್ಕೆ ಒತ್ತು ನೀಡುವ ಸಲುವಾಗಿ ಜಿಲ್ಲಾ ಕೇಂದ್ರಗಳಲ್ಲಿ ಮೇಲ್ದರ್ಜೆಯ ಆಸ್ಪತ್ರೆಗಳು, ಕೈಗಾರಿಕಾ ಕ್ರೇತ್ರಕ್ಕೆ ಪ್ರಾಮುಖ್ಯತೆ ಬಜೆಟ್ನ ಮುಖ್ಯ ಉದ್ದೇಶವಾಗಿರಲಿದೆ ಎಂದು ಹೇಳಲಾಗುತ್ತಿದೆ..
ನಿರೀಕ್ಷೆಗಳೇನು?
ಬೆಂಗಳೂರು ಹಾಗೂ ಗ್ರೇಟರ್ ಬೆಂಗಳೂರು ವಲಯದಲ್ಲಿ ಅಭಿವೃದ್ಧಿಕುಡಿಯುವ ನೀರಿನ ಸಮಸ್ಯೆ ಕಾವೇರಿ ಸಮಸ್ಯೆ ಇತ್ಯರ್ಥ, ಮೇಕೆದಾಟು ಯೋಜನೆ, ಕೆ.ಸಿ ವ್ಯಾಲಿ, ಕಾವೇರಿ 7ನೇ ಹಂತ, ಅನ್ನದಾತರ ಸಮಸ್ಯೆಗಳು, ನಿರುದ್ಯೋಗ ಸಮಸ್ಯೆ, ಶೈಕ್ಷಣಿಕ ವ್ಯವಸ್ಥೆಯ ಕುಸಿತ ಸೇರಿದಂತೆ ಹಲವು ಅಂಶಗಳು ಈ ಬಾರಿ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪರಿಹಾರ ಕಂಡುಕೊಳ್ಳಲಿ ಎಂದು ಜನರು ನಿರೀಕ್ಷೆ ಮಾಡಿದ್ದಾರೆ. ಆದರೆ ಇಂದಿನ ಬಜೆಟ್ ಚಿತ್ರಣ ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

ವಿಶೇಷತೆಯೇನು ?
ಒಬ್ಬ ವಿತ್ತ ಸಚಿವನಾಗಿ ಹಾಗೂ ಮುಖ್ಯಮಂತ್ರಿಯಾಗಿ ಸಿಎಂ ಸಿದ್ದರಾಮಯ್ಯ 16ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಕರ್ನಾಟಕ ದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯಲಿದ್ದಾರೆ. ಆರು ದಶಕಗಳ ಅವಧಿಯಲ್ಲಿ ಯಾವುದೇ ಮುಖ್ಯಮಂತ್ರಿ ಮಾಡದ ದಾಖಲೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ದಾಖಲಾಗಿದೆ.
ಕುಳಿತೇ ಬಜೆಟ್ ಮಂಡಿಸಲಿರುವ ಸಿಎಂ ?
ಮಂಡಿನೋವಿನಿಂದ ನರಳುತ್ತಿರುವ ಸಿಎಂ ಸಿದ್ದರಾಮಯ್ಯ ಹಲವು ದಿನಗಳಿಂದ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ. ಬಜೆಟ್ ಪೂರ್ವ ಅಧಿವೇಶನದಲ್ಲಿ ವಿಧಾನಸೌಧಕ್ಕೂ ಕೂಡ ವೀಲ್ ಚೇರ್ ಮೂಲಕವೇ ಆಗಮಿಸಿದ್ದರು. ಸದ್ಯದ ಆರೋಗ್ಯ ಪರಿಸ್ಥಿತಿಯಲ್ಲಿ ನಿಂತು ಬಜೆಟ್ ಮಂಡಿಸುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಕಷ್ಟವಾಗಿರಲಿದೆ. ಹೀಗಾಗಿ ಇದೇ ಮೊದಲ ಬಾರಿಗೆ ಸಿಎಂ ಕುಳಿತೇ ಬಜೆಟ್ ಮಂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಬಜೆಟ್ ಮಂಡನೆಗೂ ಮುನ್ನವೇ ವಿಧಾನಸೌಧ ವೀಲ್ ಚೇರ್ಗೆ ರಾಂಪ್ ಮತ್ತಿತ್ತರ ಸಿದ್ದತೆ ಮಾಡಿಕೊಳ್ಳಲಾಗಿದೆ…
ಅಭಿಷೇಕ್.ಎಸ್