
ಶಿವಮೊಗ್ಗ: ತುಂಗಾ ನದಿಗೆ ಹಾರಿ 24 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ. ಈತನು ತೀರ್ಥಹಳ್ಳಿ ಸಮೀಪದ ಇಂಡಬಾರ ಗ್ರಾಮದ ಜಯದೀಪ್(24) ಎಂಬ ಯುವಕನಾಗಿದ್ದು, ಡಿಗ್ರಿ ವ್ಯಾಸಂಗ ಮಾಡುತ್ತಿದ್ದ ರ್ಯಾಂಕ್ ಸ್ಟೂಡೆಂಟ್ ಆಗಿದ್ದ.
ಜಯದೀಪ್, ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ “ಅಪ್ಪ ಅಮ್ಮ, ಸಾಲ ನಿಮ್ಮ ಮೇಲೆ ಹಾಕುತ್ತಿದ್ದೇನೆ” ಎಂಬ ಸಂದೇಶ ಹಂಚಿ, ಜೀವನದಲ್ಲಿ ಜಿಗುಪ್ಸೆಗೊಂಡು ಈ ಹಠಾತ್ ನಿರ್ಧಾರ ತೆಗೆದುಕೊಂಡಿದ್ದಾನೆ.
90 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದ ಯುವಕನು, ಅಂತಿಮವಾಗಿ ತುಂಗಾ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಅವನಿಗಾಗಿ ತುಂಗಾ ನದಿಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ.


