
finally freedom for kannadigas in israel
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಸಿಲುಕಿ ಕನ್ನಡಿಗರು ಪರಿತಪಿಸುತ್ತಾ ಇದ್ದರು. ಕೊನೆಗೂ ಇಸ್ರೇಲ್ ನಲ್ಲಿರುವ ಕನ್ನಡಿಗರು ಇಂದು ತಮ್ಮ ತಾಯ್ನಾಡಿಗೆ ಸೇಫ್ ಆಗಿ ಬರುತ್ತಿದ್ದಾರೆ. ಇರಾನ್ ಮತ್ತು ಇಸ್ರೇಲ್ ನಡುವಿನ ತೀವ್ರಗೊಂಡ ಯುದ್ಧದಿಂದಾಗಿ ಇಸ್ರೇಲ್ನ ಟೆಲ್ ಅವೀವ್ನಲ್ಲಿ ಕಳೆದ ಆರು ದಿನಗಳಿಂದ ಸಿಲುಕಿದ್ದ 18 ಕನ್ನಡಿಗರ ತಂಡ ಇಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಆಗಮಿಸಿದೆ.
ಅಧ್ಯಯನ ಪ್ರವಾಸಕ್ಕಾಗಿ ಇಸ್ರೇಲ್ಗೆ ತೆರಳಿದ್ದ ಬಿಪ್ಯಾಕ್ ಸಂಸ್ಥೆಯ ನಿಯೋಗ, ಯುದ್ಧದ ಆತಂಕದ ನಡುವೆ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಭಾರತೀಯ ರಾಯಭಾರ ಕಚೇರಿ ಮತ್ತು ಇಸ್ರೇಲ್ ಸರ್ಕಾರದ ಸಹಕಾರದಿಂದ ಈ ತಂಡವನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಸಿಲುಕಿಕೊಂಡು ನೂರಾರು ಕನ್ನಡಿಗರು ಆತಂಕದಲ್ಲಿದ್ದರು. ತಮ್ಮ ತಾಯ್ನಾಡಿಕೆ ಮರಳಲು ಸಾಧ್ಯವಾ? ಎಂದು ಚಿಂತೆಗೀಡಾಗಿದ್ದರು. ಇದೀಗ ಅವರನ್ನು ಸೇಫ್ ಆಗಿ ತಾಯ್ನಾಡಿಕೆ ಕರೆತರುವಲ್ಲಿ ಯಶಸ್ಸು ಸಾಧಿಸಲಾಗಿದೆ. ಅಧ್ಯಯನ ಪ್ರವಾಸಕ್ಕಾಗಿ ಹೀಗಿದ್ದ ಬಿಪ್ಯಾಕ್ (B-PAC) ಸಂಸ್ಥೆಯ ನಿಯೋಗ ಇಂದು ಬೆಂಗಳೂರಿಗೆ ಸೇಫ್ ಆಗಿ ಲ್ಯಾಂಡ್ ಆಗುತ್ತಿದ್ದಾರೆ. ಬಿಪ್ಯಾಕ್ ನಿಯೋಗದ ನೇತೃತ್ವವನ್ನು ಕೆಪಿಸಿಸಿ ಪದವೀಧರರ ಅಧ್ಯಕ್ಷ ನಟರಾಜ್ ಗೌಡ ವಹಿಸಿದ್ದರು.
ಬಿಪ್ಯಾಕ್ ಸಂಸ್ಥೆಯಡಿ ರಾಜಕೀಯ ಮತ್ತು ಆಡಳಿತ ಕ್ಷೇತ್ರದ ಅಧ್ಯಯನಕ್ಕಾಗಿ ಜೂನ್ನ ಮೊದಲ ವಾರದಲ್ಲಿ ಈ ತಂಡ ಇಸ್ರೇಲ್ಗೆ ತೆರಳಿತ್ತು. ಆದರೆ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಜೂನ್ 13ರಿಂದ ತೀವ್ರಗೊಂಡಿದ್ದರಿಂದ ವಿಮಾನ ಸಂಚಾರ ಸ್ಥಗಿತಗೊಂಡಿತು. ಇದರಿಂದಾಗಿ ಈ ತಂಡ ಟೆಲ್ ಅವೀವ್ನಲ್ಲಿ ಸಿಲುಕಿತ್ತು. ಯುದ್ಧದ ಭೀತಿಯ ನಡುವೆಯೂ ತಂಡದ ಸದಸ್ಯರು ಬಂಕರ್ಗಳಲ್ಲಿ ಆಶ್ರಯ ಪಡೆದು ಸುರಕ್ಷಿತವಾಗಿದ್ದರು.