
ಶಾಲೆಗಳೆಂದರೆ ಮಕ್ಕಳಿಗೆ ಪಾಠ ಹೇಳುವ, ಈ ದೇಶದ ಭಾವೀ ಪ್ರಜೆಗಳನ್ನು ಸೃಷ್ಟಿಸುವ, ಉತ್ತಮ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುವ ಸ್ಥಳಗಳು. ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ ಜ್ಞಾನ ದೇಗುಲಗಳು. ಈ ದೇಗುಲಗಳಲ್ಲಿ ಜ್ಞಾನಿಗಳಿರುತ್ತಾರೆ. ಇಂಗ್ಲಿಷ್ನಲ್ಲಿ ಸ್ಕೂಲ್' ಎನ್ನುತ್ತೇವೆ. ಸ್ಕೂಲ್ ಅಂದರೆ ಸ್ಕಾಲರ್ಸ್(ವಿದ್ವಾಂಸರು, ತಜ್ಞರು, ಜ್ಞಾನಿಗಳು) ಇರುವ ಸ್ಥಳ ಅಂತ. ಹಾಗೆ ಅಲ್ಲಿರುವ ಜ್ಞಾನಿಗಳು ಮಕ್ಕಳ ನಿರ್ಮಲವೂ, ಸ್ವಚ್ಛವೂ ಆದ ಮನಸುಗಳ ಮೇಲೆ ಪ್ರಭಾವ ಬೀರಿ ಅವರ ಮಿಸುಳುಗಳಲ್ಲಿ ಜ್ಞಾನವನ್ನು, ಹೃದಯಲ್ಲಿ ಪ್ರೀತಿಯನ್ನೂ ತುಂಬುತ್ತಾರೆ. ಜ್ಞಾನಿಗಳನ್ನು, ಸುಜ್ಞಾನಿಗಳನ್ನು, ವಿಜ್ಞಾನಿಗಳನ್ನು ತಯಾರು ಮಾಡುತ್ತಾರೆ. ಹಾಗೆ ಜ್ಞಾನಿಗಳಾಗಿ ತಯಾರಾದ ಮಕ್ಕಳು(ವಿದ್ಯಾರ್ಥಿಗಳು) ಈ ರಾಷ್ಟçದ ಭವಿಷ್ಯದ ಪ್ರಜೆಗಳಾಗಿ ಸುಭದ್ರವೂ, ಸಮೃದ್ಧವೂ ಆದ ಭವ್ಯವಾದ ರಾಷ್ಟçವನ್ನೂ, ಸುಸಂಸ್ಕೃತ ಸಮಾಜವನ್ನೂ ಕಟ್ಟುತ್ತಾರೆ. ಆ ಶಾಲೆ ಸರ್ಕಾರಿ ಶಾಲೆ ಇರಬಹುದು, ಖಾಸಗಿ ಶಾಲೆ ಅಥವಾ ಕಾನ್ವೆಂಟ್ ಇರಬಹುದು, ಮಠ ಇರಬಹುದು, ಮದರಸಾಗಳಿರಬಹುದು, ಬುದ್ಧವಿಹಾರಗಳಿರಬಹುದು. ಅವೆಲ್ಲವುಗಳ ಜವಾಬ್ದಾರಿಯೂ ಕೂಡ ಇದೇ. ಜ್ಞಾನಿಗಳೂ, ಸುಸಂಸ್ಕೃತರೂ ಆದ ನಾಗರಿಕ ಪ್ರಜೆಗಳ ತಯಾರಿ, ಬದುಕಿಗೆ ಅಗತ್ಯವಾದ ನೈತಿಕಮೌಲ್ಯಗಳನ್ನು ಎತ್ತಿ ಹಿಡಿಯುವುದು. ಇಲ್ಲಿ ಈ ಬಗ್ಗೆ ಈಗ ಪ್ರಸ್ತಾಪಿಸುವುದಕ್ಕೂ ಕಾರಣವಿದೆ. ಇತ್ತೀಚೆಗೆ ನಮ್ಮ ರಾಜ್ಯದಲ್ಲಿ, ಅದೂ ರಾಜಧಾನಿ ಬೆಂಗಳೂರು ನಗರದಲ್ಲಿ ನಡೆದ ಕೆಲವು ಘಟನಾವಳಿಗಳನ್ನು ನೋಡಿ ಇದನ್ನು ಬರೆಯಬೇಕಾಗಿದೆ. ಹೌದು, ಬೆಂಗಳೂರಿನ ಹೊರವಲಯದ ಬಡಾವಣೆಯ ಮದರಸಾ ಒದರಲ್ಲಿ ನಡೆದ ಒಂದು ಅನಾಗರಿಕ, ಪೈಶಾಚಿಕ ಘಟನೆಯನ್ನು ಎಲ್ಲರೂ ಕೇಳಿದ್ದಾರೆ. ಮದರಸಾ ಎಂದರೆ ಗೊತ್ತಲ್ಲ. ಮಸಲ್ಮಾನ ಸಮುದಾಯದವರು ಮಸೀದಿಗಳಲ್ಲಿ ನಡೆಸುವ ಧಾರ್ಮಿಕ ಶಾಲೆಗಳು. ಮಸೀದಿಯಲ್ಲಿ ಒಬ್ಬ ಮೌಲ್ವಿ ಇರುತ್ತಾನೆ. ಅವನೇ ಆ ಮದರಸಾಕ್ಕೆ ಮುಖ್ಯಸ್ಥನಾಗಿರುತ್ತಾನೆ. ಅವನನ್ನು ಪ್ರಿನ್ಸಿಪಾಲ್ ಅಥವಾ ಪ್ರಾಂಶುಪಾಲ ಎಂದೂ ಕರೆಯುವ ವಾಡಿಕೆ ಕೂಡ ಇದೆ.

ಮಕ್ಕಳಿಗೆ ಪಾಠ ಮಾಡುವವನೂ ಅವನೇ. ಮಕ್ಕಳ ಸಂಖ್ಯೆ ಬಹಳ ಇದ್ದರೆ ಇನ್ನೂ ಕೆಲವರು ಬೋಧಕರೂ ಇರುತ್ತಾರೆ. ಈ ಮದರಸಾಗಳಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಪಾಠ ನಡೆಯುತ್ತದೆ. ಬೆಂಗಳೂರಿನ ಇಂತಹ ಒಂದು ಮದರಸಾದಲ್ಲಿ ಇತ್ತೀಚೆಗೆ ತಾನು ಆ ಮದರಸಾದ ಪ್ರಿನ್ಸಿಪಾಲರ ಮಗ ಎಂದು ಗುರುತಿಸಲಾದ ಒಬ್ಬ ಗೂಂಡಾ ನುಗ್ಗಿ ಅಲ್ಲಿ ಪಾಠಕ್ಕೆ ಬರುತ್ತಿದ್ದ ಪುಟ್ಟ ಪುಟ್ಟ ಹೆಣ್ಣುಮಕ್ಕಳನ್ನು ಅಮಾನುಷವಾಗಿ ಥಳಿಸಿದ. ಬಹುಶಃ ಸಿನಿಮಾಗಳಲ್ಲಿ ಪೊಲೀಸರು ಕಳ್ಳರನ್ನು ಬಾಯಿ ಬಿಡಿಸಲು ಶಿಕ್ಷೆಗೊಳಪಡಿಸುತ್ತಾರಲ್ಲ ಹಾಗೆ. ಆ ಗೂಂಡಾ, ಸಣ್ಣ ಸಣ್ಣ ಹೆಣ್ಣುಮಕ್ಕಳನ್ನು ಮೃಗೀಯವಾಗಿ ಹೊಡೆದಿದ್ದನ್ನು ಮಾಧ್ಯಮಗಳ ಮೂಲಕ ಎಲ್ಲರೂ ನೋಡಿದ್ದಾರೆ. ತನ್ನ ಬೂಟುಗಾಲಿನಿಂದ ಆ ಮಕ್ಕಳ ಕಾಲುಗಳನ್ನು ತುಳಿದು, ಕೈಗಳನ್ನು ಹಿಂದಕ್ಕೆ ತಿರುಗಿಸಿ, ಬೆನ್ನಿನ ಮೇಲೆ ರಪರಪನೆ ಬಾರಿಸಿದ ದೃಶ್ಯ ಅತ್ಯಂತ ಘೋರವಾಗಿತ್ತು. ಅವನು ಪ್ರನ್ಸಿಪಾಲನ ಮಗನೋ ತಮ್ಮನೋ ಏನೇ ಆಗಿದ್ದರೂ ಶಾಲೆಗೆ ಬಂದು ಅಲ್ಲಿ ಮಕ್ಕಳ ಮೇಲೆ ಮರಣಾಂತಿಕ ಹಲ್ಲೆ ಮಾಡುವುದಕ್ಕೆ ಅವನಿಗೆ ಅಧಿಕಾರ ಕೊಟ್ಟದ್ದು ಯಾರು..? ಅವನು ಅಲ್ಲಿಗೇಕೆ ಬಂದ... ಅವನು ಎಷ್ಟು ದಿನಗಳಿಂದ ಅಲ್ಲಿ ಇಂತಹ ಗೂಂಡಾಗಿರಿ ನಡೆಸುತ್ತಿದ್ದಾನೆ. ಅವನ ಉದ್ದೇಶವೇನು... ಈ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಿ ಅವನನ್ನು ಗಲ್ಲಿಗೆ ಹಾಕುವುದೇ ಅವನಿಗೆ ಸೂಕ್ತವಾದ ಶಿಕ್ಷೆ. ಇಲ್ಲವೆಂದಾದರೆ, ಮುಂದೆ ಅವನಿನ್ನೂ ಎಷ್ಟು ಜನ ಅಮಾಯಕ ಮಕ್ಕಳ ಮೇಲೆ ಯಾವ ರೀತಿ ದೌರ್ಜನ್ಯ ನಡೆಸುತ್ತಾನೋ... ಏನೇನು ಮಾಡುತ್ತಾನೋ... ಆ ಮಕ್ಕಳ ಪೋಷಕರೂ ಕೂಡ ಸರ್ಕಾರದ ಮೇಲೆ ಒತ್ತಡ ಹೇರಿ ಅವನಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಪೊಲೀಸರೂ ಕ್ರಮವಾಗಿ ದೋಷಾರೋಪಪಟ್ಟಿ ಸಲ್ಲಿಸಬೇಕು. ಇಲ್ಲದೆ ಹೋದರೆ ಇಂತವರಿAದ ಸಮಾಜ ಕ್ಷೆÆÃಭೆಗೊಳಗಾಗುತ್ತದೆ. ಇದಕ್ಕೆ ಹೊಣೆ ಯಾರು..? ಇವರು ಆರಕ್ಷಕರು..! ಈಗ ಆರಕ್ಷಕ(ಪೊಲೀಸ್) ಅಧಿಕಾರಿಗಳ ಕಥೆ. ಆರಕ್ಷಕರೆಂದರೆ ಕಳ್ಳ-ಕಾಕರಿಂದ, ಪುಂಡರು-ಪೋಕರಿಗಳಿAದ ಜನರನ್ನು ರಕ್ಷಿಸುವ, ಸಮಾಜದ ಸ್ವಾಸ್ಥö್ಯವನ್ನು ಕಾಪಾಡುವ ಮತ್ತು ಕಾನೂನು-ಸುವ್ಯವಸ್ಥೆಗಳನ್ನು ರಕ್ಷಿಸುವ ಮಹತ್ತರ ಜವಾಬ್ದಾರಿ ಹೊತ್ತವರು. ಇವರನ್ನು ನಂಬಿಕೊAಡೇ ಈ ಸಮಾಜ ನಿಶ್ಚಿಂತೆಯಿAದ ಇರುತ್ತದೆ. ಗಡಿಗಳಲ್ಲಿ ಯೋಧರಿದ್ದು ನಮ್ಮನ್ನು ರಕ್ಷಿಸುವಂತೆ ಇಲ್ಲಿ ಪೊಲೀಸರಿದ್ದು ಸಮಾಜವನ್ನು ರಕ್ಷಿಸುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ. ಅದರಲ್ಲಿ ಇಂಥ ಅನೇಕ ಪೊಲೀಸರು ಆ ಇಲಾಖೆ ಮತ್ತು ವೃತ್ತಿಗಳಿಗೇ ಕಳಂಕ ತರುವಂಥವರೂ ಇರುವುದನ್ನು ಕಾಣುತ್ತಿದ್ದೇವೆ. ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬ, ದೂರು ನೀಡಲು ಠಾಣೆಗೆ ಬಂದಿದ್ದ ಮಹಿಳೆಯ ಮೇಲೆಯೇ ಅತ್ಯಾಚಾರ ಎಸಗಿದ್ದನ್ನು ನೋಡಿದ್ದೇವೆ. ಆಮೇಲೆ ಅವನು ಸಿಕ್ಕಿಹಾಕಿಕೊಂಡಿದ್ದ ಕಥೆ ಗೊತ್ತಿದೆ. ಹಾಗೆಯೇ ಮೊನ್ನೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಠಾಣೆಯ ಸಬ್ಇನ್ಸ್ಪೆಕ್ಟರ್ ಶಿವಶಂಕರ ಎನ್ನುವವನು, ಕೊಲೆ ಯತ್ನ ಪ್ರಕರಣದ ಆರೋಪಿಯೊಬ್ಬನನ್ನು ರಕ್ಷಿಸಲು ಮತ್ತು ಜಪ್ತಿ ಮಾಡಿಕೊಳ್ಳಲಾಗಿದ್ದ ಮೊಬೈಲ್ ಫೋನ್ ಹಿಂದಿರುಗಿಸಲು ಬರೋಬ್ಬರಿ ೮೦ ಸಾವಿರ ರೂ. ಲಂಚ ಕೇಳಿದ್ದ. ಅದಕ್ಕೆ ಒಪ್ಪಿಕೊಂಡ ಆ ಖಿಲಾಡಿ ಆರೋಪಿ, ವಿಷಯವನ್ನು ಲೋಕಾಯುಕ್ತರಿಗೆ ಮುಟ್ಟಿಸಿದ್ದ. ಹಾಗಾಗಿ ಎಸ್ಐ ಶಿವಶಂಕರ ೮೦ ಸಾವಿರ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಅಧಿಕಾರಿಗಳು ಬಂದು ಅಟಕಾಯಿಸಿಕೊಂಡುಬಿಟ್ಟರು. ಪ್ರಸ್ತುತ ಆ ಎಸ್ಐ ಶಿವಶಂಕರ ಕಂಬಿ ಎಣಿಸುತ್ತಿದ್ದಾನೆ. ಜನರನ್ನು ರಕ್ಷಿಸುವ ಪೊಲೀಸರೇ ಇಂತಹ ದಗಲಬಾಜಿ ಕೆಲಸಕ್ಕಿಳಿದರೆ ಹೇಗೆ...? ಇದನ್ನೆಲ್ಲ ಕೇಳುವವರು ಯಾರೂ ಇಲ್ಲವೇ..? ಗೃಹ ಇಲಾಖೆ ಏನು ಮಾಡುತ್ತಿದೆ...? ಇನ್ನೊಂದು ನಿದರ್ಶನ. ಇದು ತಾಯಿಯನ್ನೇ ಹೊಡೆದ ಪಿಎಸ್ಐ ಒಬ್ಬನ ಕಥೆ. ನಿನ್ನೆ-ಮೊನ್ನೆ ಇಲ್ಲೇ ಬೆಂಗಳೂರಿನಲ್ಲೇ ನಡೆದಿದ್ದು. ಬೆಂಗಳೂರಿನ ರಾಮಮೂರ್ತಿನಗರ ಠಾಣೆಯ ಪಿಎಸ್ಐ. ಹೆಸರು ಮಂಜುನಾಥ. ಇವನಿಗೆ ೨೦೧೧ರಲ್ಲಿ ಮದುವೆಯಾಗಿ, ಇಬ್ಬರು ಮಕ್ಕಳಿದ್ದಾರೆ. ಈ ಮಂಜುನಾಥ, ಕೆಆರ್ಪುರ ನಿವಾಸಿ ಬಸವಜ್ಯೋತಿ ಎಂಬುವಳ ಜೊತೆ ಅಕ್ರಮ ಸಂಬAಧ ಹೊಂದಿದ್ದ. ಅದಕ್ಕೆ ಅವನ ತಾಯಿಯ ವಿರೋಧವಿತ್ತು. ಮಗ ಮಂಜುನಾತ ಮತ್ತು ಬಸವಜ್ಯೋತಿ ಇಬ್ಬರಿಗೂ ಬುದ್ಧಿ ಹೇಳಿದ್ದಾರೆ. ಅವರು ಕೇಳಿಲ್ಲ. ಫೆ.16ರಂದು ಭಾನುವಾರ ಮಂಜುನಾಥ್ ತಾಯಿ ಮಂಗಳಮ್ಮ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಸವಜ್ಯೋತಿಯ ಮನಗೆ ಹೋಗಿ ಈ ಅನೈತಿಕ ವ್ಯವಹಾರ ಕೈಬಿಡುವಂತೆ ಹೇಳಿದ್ದಾರೆ. ಅದೇ ವೇಳೆಗೆ ಅಲ್ಲಿಗೆ ಬಂದ ಮಗ ಮಂಜುನಾಥ, ತಾಯಿ ಮತ್ತು ಸಹೋರಿಯರ ಮೇಲೆ ಹಲ್ಲೆ ಮಾಡಿದ್ದಾನೆ. ಅವನೊಂದಿಗೆ ಬಸವಜ್ಯೋತಿಯೂ ಕೈಜೋಡಿಸಿ ಹಲ್ಲೆ ನಡೆಸಿದ್ದಾಳೆ. ಇದು ಸಮಾಜದ ಸ್ವಾಸ್ಥö್ಯ ಕಾಪಾಡುವ ಹೊಣೆ ಹೊತ್ತ ಆರಕ್ಷಕನೊಬ್ಬನ
ಥರ್ಡ್ ಕ್ಲಾಸ್’ ನಡವಳಿಕೆ. ಇಂತಹ ಆರಕ್ಷಕರಿಂದ ಸಮಾಜ ಏನನ್ನು ನಿರೀಕ್ಷಿಸಬಹುದು…? ಇಂತಹ ಸಿಬ್ಬಂದಿಯನ್ನಿಟ್ಟುಕೊAಡು ಸರ್ಕಾರ ಯಾವ ರೀತಿಯಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಕೊಡಬಹುದು…? ಆರಕ್ಷಕರು ಅತ್ಯಾಚಾರಿಗಳು, ಲಂಚಕೋರರು, ಅನೈತಿಕ ವ್ಯವಹಾರ ನಿರತರು ಆದರೆ ಸಮಾಜದ ಪಾಡೇನು…? ಯಾವಳೋ ಒಬ್ಬಳಿಗಾಗಿ ತನ್ನ ತಾಯಿ, ಸಹೋದರಿಯರನ್ನೇ ಹೊಡೆಯುವ ಆರಕ್ಷಕ ಇನ್ನು ಬೇರೆ ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳಬಹುದು..? ಈ ಎಲ್ಲಾ ಪ್ರಶ್ನೆಗಳಿಗೆ ಗೃಹಸಚಿವರೇ ಉತ್ತರಿಸಬೇಕು. ಹೀಗೆ ನಡೆದುಕೊಳ್ಳುವ ಆರಕ್ಷಕ ಅಧಿಕಾರಿಗಳನ್ನು ಕೆಲಸದಿಮದ ವಜಾ ಮಾಡಬೇಕು. ನಮ್ಮ ಗೃಹಮಂತ್ರಿಗಳು ತಾವು ಮುಖ್ಯಮಂತ್ರಿಯಾಗುವ ಕಾರ್ಯಕ್ರಮವನ್ನು ಕೊಂಚ ಮುಂದೂಡಿ ಸಮಾಜದ ಪರಿಸ್ಥಿತಿಯನ್ನು ಗಮನಿಸಬೇಕು. ಮಕ್ಕಳ ಮೇಲೆ ಹಲ್ಲೆ ಮಾಡಿದ ಪುಂಡನನ್ನು ಗಲ್ಲಿಗೆ ಹಾಕಬೇಕು, ಈ ನರರೂಪದ ಆರಕ್ಷಕ ರಾಕ್ಷಸರನ್ನು ಕೆಲಸದಿಂದ ವಜಾ ಮಾಡಬೇಕು. ಗೃಹಸಚಿವರು ಅಷ್ಟು ಧೈರ್ಯ ಮಾಡಿಯಾರೇ…?