
ತಿರುಪತಿ ತಿಮ್ಮಪ್ಪನ ಪ್ರಸಾದಕ್ಕೆ ಮತ್ತೆ ನಂದಿನಿ ತುಪ್ಪದ ಸುವಾಸನೆ ಮರಳಲಿದೆ. ಕಳೆದ ಮೂರು ವರ್ಷಗಳಿಂದ ನಂದಿನಿ ತುಪ್ಪದ ಸರಬರಾಜು ತಾತ್ಕಾಲಿಕವಾಗಿ ನಿಂತು ಹೋಗಿದ್ದರೆ, ಈಗ KMF (ಕರ್ನಾಟಕ ಮಿಲ್ಕ್ ಫೆಡರೇಷನ್) ಮತ್ತೆ ತಿರುಪತಿಗೆ ತುಪ್ಪ ಸರಬರಾಜು ಮಾಡಲು ಸಜ್ಜಾಗಿದೆ.
ಪ್ರಾಯೋಗಿಕವಾಗಿ 20 ಸಾವಿರ ಕೆಜಿ ತುಪ್ಪವನ್ನು ತಿರುಪತಿಗೆ ಕಳುಹಿಸಲಾಗಿದ್ದು, ಇದು ವಾರದಲ್ಲಿ 3 ರಿಂದ 4 ಟ್ಯಾಂಕರ್ಗಳಲ್ಲಿ ತಿರುಪತಿಗೆ ತಲುಪಲಿದೆ. KMFಗೆ ಈಗಾಗಲೇ 350 ಟನ್ ತುಪ್ಪದ ಬೇಡಿಕೆ ಬಂದಿದೆ.
ತುಪ್ಪದ ಮೊದಲ ಟ್ಯಾಂಕರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ KMF ಅಧ್ಯಕ್ಷ ಭೀಮಾ ನಾಯ್ಕ್, MD ಜಗದೀಶ್, ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
