
ಚೆನ್ಮೆನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ ಜಯ ಗಳಿಸಿದೆ. ಟಾಸ್ ಗೆದ್ದು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡ ನಾಯಕ ಸೂರ್ಯಕುಮಾರ್ ಯಾದವ್ ನಿರ್ಧಾರ ಮೊದಲ ಓವರ್ನಲ್ಲೇ ಸಾಬೀತು ಆಯಿತ್ತು. ಮೊದಲ ಓವರ್ನಲ್ಲಿಯೇ ಫಿಲ್ ಸಾಲ್ಟ್ ಔಟಾಗಿ ಪೆವಿಲಿಯನ್ ಸೇರಿದರು. ನಂತರ ಬಂದ ನಾಯಕ ಜೋಸ್ ಬಟ್ಲರ್ ತಾಳ್ಮೆಯ ಆಟವಾಡಿ 45ರನ್ ಗಳಿಸಿದರು. ನಾಯಕನಿಗೆ ಬೇರೆ ಬ್ಯಾಟ್ಸ್ಮನ್ಗಳು ಸಾಥ್ ನೀಡದೇ ಇರೋದು ತಂಡದ ರನ್ ಗಳಿಕೆಯ ವೇಗಕ್ಕೆ ಪೆಟ್ಟು ಬಿದ್ದು ಅಂತಿಮವಾಗಿ ಇಂಗ್ಲೆಂಡ್ ತಂಡ 165 ರನ್ ಗಳಿಸಿತ್ತು. ನಂತರ 166 ರನ್ಗಳನ್ನು ಚೇಸ್ ಮಾಡಲು ಹೊರಟ ಟೀಂ ಇಂಡಿಯಾಗೆ ಸಹ ಆರಂಭದಲೇ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡಿತ್ತು. ನಾಯಕ ಸೂರ್ಯ ಕುಮಾರ್ ಸಹ ಕ್ರೀಸ್ಗೆ ಬಂದಷ್ಟೇ ವೇಗವಾಗಿ ಹಿಂತಿರುಗಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ಒತ್ತಡಕ್ಕೊಲಗಾಗದೇ ತಿಲಕ್ ವರ್ಮಾ ವಿನ್ನಿಂಗ್ ಇನ್ನಿಂಗ್ಸ್ ಆಡಿದರು. 55 ಎಸೆತಗಳಲ್ಲಿ 72 ರನ್ ಗಳಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಈ ಗೆಲ್ಲವಿನಿಂದ 5 ಸರಣಿಯ ಪಂದ್ಯದಲ್ಲಿ ಭಾರತ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.