
ರಣಜಿ ಇತಿಹಾಸದಲ್ಲಿ ವಿದರ್ಭ ತಂಡ 3ನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಕೇರಳ ವಿರುದ್ದ ನಡೆದ ಪಂದ್ಯದಲ್ಲಿ ಡ್ರಾ ಮಾಡಿಕೊಂಡ ವಿದರ್ಭ ಮೊದಲ ಇನ್ನಿಂಗ್ಸ್ನ ಮುನ್ನಡೆ ಆಧಾರದ ಮೇರೆಗೆ ರಣಜಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಮೊದಲ ಇನ್ನಿಂಗ್ಸ್ನಲ್ಲಿ ವಿದರ್ಭ 379 ರನ್ ಕಲೆ ಹಾಕಿದ್ದರೆ, ಕೇರಳ ತಂಡ 342 ರನ್ಗಳನ್ನು ಗಳಿಸಿತ್ತು. ಪಂದ್ಯದ ಕೊನೆಯ ದಿನದಲ್ಲಿ ವಿದರ್ಭ 2ನೇ ಇನ್ನಿಂಗ್ಸ್ನಲ್ಲಿ 4 ವಿಕೆಟ್ಗೆ 249 ರನ್ ಗಳಿಸಿ ಆಟವಾಡುತ್ತಿದ್ದಾಗ ಅಂತಿಮವಾಗಿ ಪಂದ್ಯ ಡ್ರಾ ಎಂದು ನಿರ್ಧರಿಸಲಾಯಿತ್ತು. ಆ ಮೂಲಕ ವಿದರ್ಭ ಮೂರನೇ ಬಾರಿಗೆ ರಣಜಿ ಚಾಂಪಿಯನ್ ಆಯಿತ್ತು. ವಿಶೇಷ ಅಂದರೆ ಕಳೆದ 7 ವರ್ಷದಲ್ಲಿ 4 ಬಾರಿ ಫೈನಲ್ ಪ್ರವೇಶ ಮಾಡಿ 3 ಬಾರಿ ವಿನ್ನರ್ ಆಗಿ ಹೊರಹೊಮ್ಮಿತ್ತು. 2017-18, 2018-19ರಲ್ಲಿ ಸತತವಾಗಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಇನ್ನೂ ರಣಜಿ ಟೂರ್ನಿ ಗೆದ್ದ ವಿದರ್ಭ ತಂಡಕ್ಕೆ ಬಿಸಿಸಿಐಯಿಂದ 5 ಕೋಟಿ ನಗದು ಬಹುಮಾನ ಲಭಿಸಿದರೆ, ವಿದರ್ಭ ಕ್ರಿಕೆಟ್ ಸಂಸ್ಥೆ 3 ಕೋಟಿ ನೀಡಲಿದೆ. ಇದರ ಜೊತೆಗೆ ರನ್ನರ್ ಅಪ್ ಕೇರಳ ತಂಡಕ್ಕೆ ಬಿಸಿಸಿಐ 3 ಕೋಟಿ ಬಹುಮಾನ ನೀಡಲಿದೆ.

ಅಭಿಷೇಕ್. ಎಸ್