
ಇತ್ತೀಚೆಗೆ ಭಾರತೀಯ ಕ್ರಿಕೆಟ್ ಆಟಗಾರರಿಗೆ ಬಿಸಿಸಿಐ ಜಾರಿಗೆ ತಂದಿದ್ದ ನಿಯಮದ ವಿರುದ್ದ ವಿರಾಟ್ ಕೊಹ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ಬೆಂಗಳೂರಿನ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ನಲ್ಲಿ ನಡೆದ ಆರ್ಸಿಬಿ ಇನ್ನೋವೇಷನ್ ಲ್ಯಾಬ್ ಅಯೋಜಿಸಿದ್ದ ಇಂಡಿಯನ್ ಸ್ಪೋಟ್ಸ್ನಲ್ಲಿ ಮಾತನಾಡಿದ ಕೊಹ್ಲಿ ಆಟಗಾರರಿಂದ ಕುಟುಂಬದವರನ್ನು ದೂರವಿಡುವ ಬಿಸಿಸಿಐ ನಿಯಮದ ಬಗ್ಗೆ ಪ್ರಶ್ನೆ ಕೇಳಿದಾಗ ಈ ರೀತಿ ಉತ್ತರಿಸಿದ್ದಾರೆ. ಫೀಲ್ಡ್ನಲ್ಲಿ ನಿರಾಸೆ ಅನುಭವಿಸಿದಾಗ ಸಾಂತ್ವನ ಹೇಳುವುದು ಕುಟುಂಬಸ್ಥರು. ಮೈದಾನದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಆಟಗಾರನಿಗೆ ಕುಟುಂಬದ ನೆರವು ಎಷ್ಟು ಮುಖ್ಯ ಎಂಬುದನ್ನು ಇವರು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆಟದಲ್ಲಿ ಏನು ಪಾತ್ರವಿಲ್ಲದವರನ್ನು ದೂರವಾಗಿಸಿ ಅವರ ಮೇಲೆ ನಿಯಂತ್ರಣ ಹೇರುವುದು ನನಗೆ ತುಂಬಾ ನಿರಾಶೆ ಉಂಟಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ. ಇದೇ ವೇಳೆ ಮಾತು ಮುಂದುವರೆಸಿದ ಕೊಹ್ಲಿ ನಾನು ಕೋಣೆಗೆ ಹೋಗಿ ಒಬ್ಬಂಟಿಯಾಗಿ ಕುಳಿತು ದುಃಖಿಸಲು ಬಯಸುವುದಿಲ್ಲ. ನಾನು ಸಾಮಾನ್ಯವಾಗಿರಲು ಬಯಸುತ್ತೇನೆ.ಆಗ ಮಾತ್ರ ನಿಮ್ಮ ಆಟವನ್ನು ಒಂದು ಜವಾಬ್ದಾರಿಯುತವಾಗಿ ಪರಿಗಣಿಸಬಹದು ಎಂದು ಕೊಹ್ಲಿ ಕುಟುಂಬಸ್ಥರ ಜೊತೆ ಕಳೆಯುವ ಯಾವುದೇ ಅವಕಾಶವನ್ನು ನಾನು ತಪ್ಪಿಸಿಕೊಳ್ಳಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.

ಅಭಿಷೇಕ್.ಎಸ್