
ಪಾಪ ಕ್ಷಯ ಖಜಾನೆ ಅಕ್ಷಯ…!
144 ವರ್ಷದ ಕುಂಭಮೇಳ ಆಯೋಜನೆಯ ಪ್ರಕ್ರಿಯೆಗಳು ಆರಂಭವಾದ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಟೀಕಾಕಾರರ ಟೀಕಾಸ್ತçಗಳು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರ್ಕಾರದತ್ತ ತೂರಿ ಬರುತ್ತಲೇ ಇದ್ದವು. ಈ ಬಾರಿ ಕುಂಭಮೇಳದಲ್ಲಿ 30 – 40 ಕೋಟಿ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದಾಗಲೂ ಅದು ಟೀಕೆಗೊಳಗಾಯಿತು. ಇನ್ನು ಬೆಂಕಿ, ಕಾಲ್ತುಳಿತದಂತಹ ಅವಘಡಗಳು ನಡೆದಾಗಲಂತೂ ಕುಂಭವೇಳವನ್ನು ಆಯೋಜಿಸಿದ್ದೇ ತಪ್ಪು ಎನ್ನುವಂತಹ ಮಾತುಗಳು ಕೇಳಿ ಬಂದಿದ್ದುಂಟು. ಆಧುನಿಕ ಐಷಾರಾಮಿ ಟೆಂಟುಗಳಿಗೆ ಬೆಂಕಿ ಬಿದ್ದಾಗ, ಸಿಲಿಂಡರ್ ಸ್ಫೋಟ ಸಂಭವಿಸಿದಾಗ ಅದೊಂದು ಅಪಶಕುನ ಎಂಬಂತೆಯೇ ಬಿಂಬಿಸಲಾಯಿತು. ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರ್ಕಾರ ಇದಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ . ತನ್ನ ಪಾಡಿಗೆ ತಾನು ಜನಪರ ಕಾರ್ಯಕ್ರಮಗಳನ್ನು ಕೈಗೊಂಡು ಜನಹಿತದ ಕೆಲಸ ಮಾಡಿದರು.
ವಿಶೇಷವೆಂದರೆ, ಮಾಮೂಲಾಗಿ ನಡೆಯುವಂತಹ ಘಟನೆಗಳು ನಡೆದದ್ದನ್ನು ಬಿಟ್ಟರೆ ಇನ್ನಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಜನ ಹೆದರಿದ್ದು ಅಂತಹ ಅಹಿತಕರ ಘಟನೆಗಳಾದ ಬಾಂಬ್ ಸ್ಫೋಟ , ಇಂತಹವುಗಳಿಗೆ , ಅಷ್ಟು ಕೋಟ್ಯಂತರ ಜನ ಒಂದೆಡೆ ಸೇರಿದರೂ, ಇಡೀ 45 ದಿನಗಳ ಆ ವಿಶ್ವವಿಖ್ಯಾತ ಕುಂಭಮೇಳದ ಪ್ರದೇಶದಲ್ಲಿ ಒಂದೇ ಒಂದು ಪ್ರಮಾದವೂ ನಡೆಯಲಿಲ್ಲ ಎಂದರೆ ಅಲ್ಲಿನ ಪೊಲೀಸ್ ಬಂದೋಬಸ್ತ್ ಆಗಲಿ, ಭದ್ರತಾ ವ್ಯವಸ್ಥೆಗಳೇ ಆಗಲಿ, ಇತರ ನಾಗರಿಕ ವ್ಯವಸ್ಥೆಗಳೇ ಆಗಲಿ ಎಷ್ಟರಮಟ್ಟಿಗೆ ಇದ್ದವು ಎಂಬುದು ಸ್ಪಷ್ಟವಾಗುತ್ತದೆ. ಈ ವಿಷಯದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಅವರ ವೈರಿಗಳೂ ಕೂಡ ಅಭಿನಂದಿಸಲೇಬೇಕು. ಏಕೆಂದರೆ, ಒಂದೋ ಎರಡೋ ಲಕ್ಷದಷ್ಟು ಜನ ಸೇರಿದರೂ ಸಾಕು ಆ ಸ್ಥಳದಲ್ಲಿ ಏನಾದರೂ ಒಂದಲ್ಲ ಒಂದು ರೀತಿಯ ಮಾನವ ಸಂಬಂಧೀ ಅಹಿತಕರ ಘಟನೆಗಳು ನಡೆಯುವುದು ಸಾಮಾನ್ಯವೇ.
ಚ ಆದರೆ ಪ್ರಯಾಗ್ರಾಜ್ನಲ್ಲಿ ಅಷ್ಟು ಜನ ಭಕ್ತರು ಸೇರಿದ್ದರೂ ಯಾರೂ ಯಾವುದೇ ರೀತಿಯ ಅಪಚಾರವನ್ನೂ ಅಲ್ಲಿ ಎಸಗಲು ಅವಕಾಶ ಇರಲೇ ಇಲ್ಲ. ನದಿ ನಿರು ಕೊಳೆ ವಿಷಯದಲ್ಲಿ ರಾಷ್ಟ್ರೀಯ ಹಸಿರು ಮಂಡಳಿ(ಎನ್ಜಿಟಿ) ಆಕ್ಷೇಪಿಸಿದ್ದು ನ್ಯಾಯವೇ. ಆದರೂ ಆ ಬಗ್ಗೆ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಅದನ್ನೂ ಮೀರಿ ಜಲಮಾಲಿನ್ಯ ಉಂಟಾಗಿದ್ದನ್ನು ಯಾರಾದರೂ ಒಪ್ಪಿಕೊಳ್ಳಲೇಬೇಕು. ಆದರೆ, ಒಂದು ವಿಷಯವನ್ನಿಲ್ಲಿ ಗಮನಿಸಬೇಕು. ವಾಸ್ತವವಾಗಿ ಪ್ರಯಾಗ್ರಾಜ್ನ ಮಹಾಕುಂಭಮೇಳದಲ್ಲಿ ಭಾಗವಹಿಸಿದ ಜನ ಎಷ್ಟು ಗೊಂತ್ತೇ…? ಒಂದು ಮೂಲದ ಪ್ರಕಾರ ೫೦ ಕೋಟಿ. ಇನ್ನೊಂದು ಮೂಲದ ಪ್ರಕಾರ, ಬರೋಬ್ಬರಿ 60 – 80 ಕೋಟಿ…! ಅದೇನೇ ಇರಲಿ, ಒಟ್ಟಾರೆ ನಮ್ಮ ದೇಶದ ಮುಕ್ಕಾಲು ಪಾಲು ಜನ ಅಲ್ಲಿತ್ತು ಎಂದಾಯಿತು. ಹಾಗಾದರೆ ಅಷ್ಟು ಜನ ಸೇರಿದ ಜಾಗದಲ್ಲಿ, ಅಷ್ಟೂ ಜನ ಮಲಮೂತ್ರ ವಿಸರ್ಜನೆ ಮಾಡಿದರೆ ಅಲ್ಲಿನ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಯಾರೂ ಊಹಿಸಬಹುದು. ಇದು ಅನಿವಾರ್ಯ ಕೂಡ. ಸರ್ಕಾರ ಒಂದು ಹಂತದಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಿದ್ದರೂ ಮಿತಿಮೀರಿ ಜನ ಜಮಾವಣೆಗೊಂಡಾಗ ಇಂತಹವುಗಳನ್ನು ನಿಯಂತ್ರಿಸುವುದು ಕಷ್ಟವೇ. ಯಾವ ಸರ್ಕಾರಕ್ಕೂ ಅದು ಅಷ್ಟು ಸುಲಭದ, ಸರಳವಾದ ಕೆಲಸವಲ್ಲ.
ಆದರೂ ಅಂತಹ ಯಾವುದೇ ಒಂದು ಅಹಿತಕರ ಘಟಟನೆಯೂ ನಡೆಯಲಿಲ್ಲ ಎನ್ನುವುದರ ಬಗ್ಗೆ ಪ್ರಶಂಸಿಸಲೇಬೇಕು. ಟೀಕೆಗಾಗಿ ಟೀಕಿಸುವುದಾದರೆ ಏನು ಮಾಡುವುದೂ ಸಾಧ್ಯವಿಲ್ಲ. ಪ್ರತಿ 12ವರ್ಷಗಳಿಗೊಮ್ಮೆ ನಡೆಯುವ ಈ ಕುಂಭಮೇಳ ಕಳೆದ ಬಾರಿ 2013 ರಲ್ಲಿ ಪ್ರಯಾಗ್ರಾಜ್ನಲ್ಲಿಯೇ ನಡೆದಿತ್ತು. ಪ್ರಯಾಗ್ರಾಜ್ ಸೇರಿದಂತೆ ದೇಶದ ಪ್ರಮುಖ ನಾಲ್ಕು ಧಾರ್ಮಿಕ ಸ್ಥಳಗಳಲ್ಲಿ ಮೂರು ವರ್ಷಗಳಿಗೊಮ್ಮೆ ಸರದಿಯಲ್ಲಿ ಕುಂಭಮೇಳ ನಡೆಯುತ್ತದೆ. ಒಂದನೆಯದು, ಉತ್ತರಾಖಂಡ್ನ ಹರಿದ್ವಾರದ ಗಂಗಾನದಿ ತೀರದಲ್ಲಿ, ಎರಡನೆಯದಾಗಿ, ಮಧ್ಯಪ್ರದೇಶದ ಉಜ್ಜಯಿನಿಯ ಶಿಪ್ರಾ ನದಿತೀರದಲ್ಲಿ, ಮೂರನೆಯದಾಗಿ ಮಹಾರಾಷ್ಟ್ರದ ನಾಸಿಕ್ನ ಗೋದಾವರಿ ನದಿತೀರದಲ್ಲಿ ಮತ್ತು ಕೊನೆಯದಾಗಿ ಉತ್ತರ ಪ್ರದೆಶದ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದ(ಗಂಗಾ-ಯಮುನಾ-ಗುಪ್ತಗಾಮಿನಿ ಸರಸ್ವತಿ ನದಿಗಳ ಸಂಗಮ)ಲ್ಲಿ ಕುಂಭಮೇಳಗಳು ನಡೆಯುತ್ತವೆ.
ಆರು ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ ನಡೆಯುತ್ತದೆ. 2019ರಲ್ಲಿ ಅಂತಹ ಒಂದು ಮೇಳ ಇಲ್ಲಿ ನಡೆದಿತ್ತು.
144 ವರ್ಷಕ್ಕೊಮ್ಮೆ ಬರುವ ಈ ಮಹಾ ಕುಂಭಮೇಳ ಅನೂಹ್ಯ ರೀತಿಯಲ್ಲಿ ಆರ್ಥಿಕ ಕ್ಷೇತ್ರವೂ ಸೇರಿದಂತೆ ಎಲ್ಲಾ ವಿಧದಲ್ಲೂ ಅದ್ಭುತ ಯಶಸ್ಸಿನೊಂದಿಗೆ ಸಂಪನ್ನಗೊAಡಿದೆ. ಮಹಾ ಕುಂಭಮೇಳ ಹೀಗೆ ಆರ್ಥಿಕವಾಗಿ ಯಶಸ್ವಿಯಾಗಲು ಕಾರಣ ವಿಶ್ವದ ಮೂಲೆಮೂಲೆಗಳಿಂದ ಹರಿದು ಬಂದ ಭಕ್ತಜನಸಾಗರ. ವಾಸ್ತವವಾಗಿಯೂ ಅದೊಂದು ಜನಸಾಗರವೇ… ಇಲ್ಲಿ ಈ ಮೇಳದಿಂದ ಯೋಗಿಯವರ ಸರ್ಕಾರದ ಖಜಾನೆಗೆ ಹರಿದುಬಂದ ಆದಾಯ ನಿಜಕ್ಕೂ ಅಚ್ಚರಿ ತರಿಸುವಂಥದು. ಕರ್ಕಾಟಕ ಸಂಕ್ರಾಂತಿಯಂದು ಆರಂಭಗೊಂಡ ಮಹಾಕುಂಭ ಜಾತ್ರೆ ಮಹಾ ಶಿವರಾತ್ರಿಯಂದು ಮುಕ್ತಾಯವಾಗಿದೆ.
ಇಷ್ಟು ದಿನ ಇಲ್ಲಿ ಹಲವು ಅವಘಡಗಳು ಸಂಭವಿಸಿದ್ದೂ ಇದೆ. ಜಲಮಾಲಿನ್ಯ, ವಾಯುಮಾಲಿನ್ಯ ಕೂಡ ಚರ್ಚೆಗೆ ಗ್ರಾಸವಾಗಿದೆ. ಸುಮಾರು ಅರುವತ್ತು ಕೋಟಿ ಜನರು ಭಾಗವಹಿಸಿರಬಹುದು ಎನ್ನಲಾಗುತ್ತಿರುವ ಮಹಾಕುಂಭಮೇಳ ಇದುವರೆಗೆ ಯಾವ ಮೇಳವೂ ಕಂಡು ಕೇಳರಿಯದಂಥ ಅದ್ಭುತ ವಿತ್ತೀಯ ಲಾಭವನ್ನು ಗಳಿಸಿದೆ ಎಂದು ವರದಿಯಾಗಿದೆ. ಇದೊಂದು ಹೊಸ ವಿಶ್ವದಾಖಲೆಯೇ ಸರಿ. ಇಲ್ಲಿ ಸಂಗ್ರಹವಾಗಿರುವ ರಾಜಾದಾಯ ಎಷ್ಟು ಅಂದರೆ, ಬರೋಬ್ಬರಿ ಮೂರರಿಂದ ನಾಲ್ಕು(3-4) ಲಕ್ಷ ಕೋಟಿ ರೂ.ಗಳು. ಅಂದರೆ ಅದು ನಮ್ಮ ಕರ್ನಾಟಕ ರಾಜ್ಯದ ಬಜೆಟ್ಗೂ ಹೆಚ್ಚಿನ ಮೊತ್ತ…! ಅಂದರೆ ನೀವೇ ಊಹಿಸಿ. ನಿಜಕ್ಕೂ ಇದೊಂದು ಮೈಲುಗಲ್ಲೇ ಸರಿ. ಯಾರೇನು ಟೀಕಿಸಿದರೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎಲ್ಲಾ ಟೀಕಾಕಾರರಿಗೂ ಮೌನದಿಂದ ತಮ್ಮ ಕೃತಿಯ ಮೂಲಕವೇ ಉತ್ತರ ನೀಡಿದ್ದಾರೆ. ಆದಿತ್ಯನಾಥರ ಈ ದಿಟ್ಟ ಉತ್ತರಕ್ಕೆ ಟೀಕಾಕಾರರೆಲ್ಲ ತತ್ತರಿಸಿ ಹೋಗಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ತಾವು ಕೆಲಸ ಮಾಡಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ.
ಇಲ್ಲಿ ನಡೆದಿರುವುದು ಲಕ್ಷಾಂತರ ಕೋಟಿ ವಹಿವಾಟು. ಪ್ರಯಾಗ್ರಾಜ್ ಮಾತ್ರವಲ್ಲದೆ ಸುತ್ತಮುತ್ತಲಿನ 150 ಕಿ.ಮೀ. ವ್ಯಾಪ್ತಿಯ ಅಯೋಧ್ಯೆ, ಕಾಶಿ ಮುಂತಾದೆಡೆ ಕೂಡ ಆರ್ಥಿಕ ಲಾಭವಾಗಿದೆ. ಈ ಮೇಳಕ್ಕೆ ಉತ್ತರ ಪ್ರದೇಶ ಸರ್ಕಾರ ಹೂಡಿಕೆ ಮಾಡಿದ್ದ ಬಂಡವಾಳ ೭,೫೦೦ ಕೋಟಿ. ಸರ್ಕಾರ ನಿರ್ಮಿಸಿದ್ದ ಕುಂಭನಗರಿ ವೆಚ್ಚ ಸಹಿತ ಹಿಂದಿರುಗಿದೆ. ಆರ್ಥಿಕ ವಹಿವಾಟು ಹೊಸ ದಾಖಲೆ ಬರೆದಿವೆ.
ವಿದೇಶೀ ಪ್ರಜೆಗಳ ಭಾಗವಹಿಸುವಿಕೆ
ಈ ಮಹಾಕುಂಭಮೇಳದಲ್ಲಿ ನಿಜವಾಗಿಯೂ ಜಗದ ಗಮನ ಸೆಳೆದ ವಿಚಾರವೆಂದರೆ, ವಿದೇಶಗಳಿಂದ ಬಂದ ಪ್ರಜೆಗಳು. ವಿದೆಶೀಯರೆಂದರೆ ವಿವಿಧ ದೇಶಗಳಿಂದ ಆಗಮಿಸಿ ಕುಂಭಮೇಳದಲ್ಲಿ ಭಾಗವಹಿಸಿದ ಲಕ್ಷಾಂತರ ಮಂದಿ, ಅಮೆರಿಕ, ಜರ್ಮನಿ, ದಕ್ಷಿಣ ಆಫ್ರಿಕ, ಬ್ರೆಜಿಲ್ ಸೇರಿದಂತೆ ಹಲವು ದೆಶಗಳ ಜನರು ಭಾರತದ ಭವ್ಯ ಪರಂಪರೆಯನ್ನು, ಸಂಸ್ಕೃತಿಯನ್ನು, ಧಾರ್ಮಿಕ ರೀತಿ-ನೀತಿಗಳನ್ನು ಕಂಡು ಮಂತ್ರಮುಗ್ಧರಾದರು. ತಾವೂ ಭಾರತೀಯರೊಂದಿಗೆ ಸೇರಿ ಭಜನೆ, ಪ್ರಾರ್ಥನೆಗಳನ್ನು ಮಾಡಿ ತಮ್ಮ ಭಕ್ತಿಯನ್ನು ಮೆರೆದರು. ಒಟ್ಟಾರೆ ಭಾರತದ ಭವ್ಯ ಸಂಸ್ಕೃತಿ-ಪರಂಪರೆಗಳನ್ನು ಜಗತ್ತಿನೆದುರು ಅನಾವರಣ ಮಾಡುವಲ್ಲಿ ಕೇವಲ ಯಶಸ್ಸು ಕಂಡದ್ದಷ್ಟೇ ಅಲ್ಲದೆ, ಏಕಮೇವಾದ್ವಿತೀಯವೆನಿಸಿತು. ಇದೊಂದು `ನಭೂತೋ ನಭವಿಷ್ಯತಿ’ ಎಂಬತಹ ಧಾರ್ಮಿಕ ಕಾರ್ಯಕ್ರಮ ಎನ್ನುವುದರಲ್ಲಿ ಯಾವುದೇ ಸಂದೇಹವೂ ಇಲ್ಲ. ಅಲ್ಲಿನ ಸರ್ಕಾರ ಜನರ ಅನುಕೂಲಕ್ಕಾಗಿ 7,500 ಕೋಟಿ ರೂ. ವೆಚ್ಚ ಮಾಡಿ ರಸ್ತೆ, ಮೇಲ್ಸೇತುವೆ(ಫ್ಲೈಓವರ್), ಅಂಡರ್ಪಾಸ್ಗಳ ನಿರ್ಮಾಣ ಮಾಡಿತು. ಅತ್ಯಾಧುನಿಕ ಟೆಂಟುಗಳ ಒಂದು ಹೊಸ ನಗರವನ್ನೇ ನಿರ್ಮಾಣ ಮಾಡಿತ್ತು. ಕುಂಭ ಪ್ರದೇಶವನ್ನು ಹೊಸ ಜಿಲ್ಲೆಯನ್ನಾಗಿ ಘೋಷಿಸಿದ್ದು ಉತ್ತರಪ್ರದೇಶದ 73ನೇ ಜಿಲ್ಲೆ ಇದಾಗಿದೆ.