
Despite denial of permission, RCB is being treated with respect under pressure from CM and DCM
ಜೂನ್ 3ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಚಾಂಪಿಯನ್ಶಿಪ್ ಗೆದ್ದಾಗ, ಕರ್ನಾಟಕ ಮತ್ತು ಬೆಂಗಳೂರಿನ ಹೆಮ್ಮೆಯ ತಂಡಕ್ಕೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಜೂನ್ 4 ರ ಸಂಜೆ ಸತ್ಕಾರ ಸಮಾರಂಭವನ್ನು ಏರ್ಪಡಿಸಲಾಗಿದೆ, ಕನ್ನಡಿಗರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮುಖ್ಯಮಂತ್ರಿಯವರೇ ಟ್ವೀಟ್ ಮಾಡಿದ್ದಾರೆ ಈಗ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಪೊಲೀಸರು ಅನುಮತಿ ನೀಡದಿದ್ದರೂ ಕಾರ್ಯಕ್ರಮವನ್ನು ಅಯೋಜಿಸಲಾಯಿತು ಎಂದು ಸರ್ಕಾರದ ವಿರುದ್ದ ಗುಡುಗಿದ್ದಾರೆ.
ಜೂ. 4 ರಾಜ್ಯದ ಇತಿಹಾಸದಲ್ಲಿ ಕರಾಳ ದಿನವೆಂದು ದಾಖಲಾಗಿದೆ. ಆರ್.ಸಿ.ಬಿ. ಗೆದ್ದ ಬಳಿಕ ದೇಶದಲ್ಲಿ ಸಂಭ್ರಮಾಚರಣೆ ನಡೆದಿದೆ. ಆದ್ರೆ ಬೆಂಗಳೂರಿನಲ್ಲಿ ಇಬ್ಬರು ದಿಗ್ಗಜ್ಜರ ನಡುವೆ ಪೈಪೋಟಿ ನಡೆದಿದೆ. ಕಾಂಗ್ರೆಸ್ ಸರ್ಕಾರಕ್ಕೆ ಭರ್ಜರಿ ಜನಪ್ರಿಯತೆ ಇದೆ ಎಂದು ಯಾರೋ ಹೇಳಿದ್ದಾರೆ. ಜಾಹಿರಾತು ಮತ್ತು ಗ್ಯಾರಂಟಿಯಿಂದ ಜನಪ್ರಿಯತೆ ಇದೆ. ಆರ್.ಸಿ.ಬಿ. ಕಪ್ ಗೆದ್ದ ಬಳಿಕ ಆ ವಾತಾವರಣ ಕೂಡ ಬಳಸಿಕೊಳ್ಳಬೇಕೆಂಬ ಹಠ-ಚಟ ಇತ್ತು. ವಿಧಾನಸೌಧದ ಮೆಟ್ಟಿಲ ಮೇಲೆ ವಿಜಯೋತ್ಸವ ಆಚರಣೆ ಮಾಡಬೇಕೆಂದು ತೀರ್ಮಾನವಾದ ಬಳಿಕ ಇಬ್ಬರ ನಡುವೆ ಪೈಪೋಟಿ ನಡೆದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ಸಂಭ್ರಮಾಚರಣೆ ನಡೆದಿದೆ. ಡಿ.ಕೆ. ಶಿವಕುಮಾರ್ ಅವರೇ ಚಾಂಪಿಯನ್ ರೀತಿ ಏರ್ಪೋರ್ಟ್ ಗೆ ಬಂದು ಅಪ್ಕೊಂಡು, ತಬ್ಕೊಂಡು, ಬಾಚ್ಕೊಂಡು ಹೋಗಿದ್ದಾರೆ. ಸ್ವಲ್ಪ ಏರುಪೇರಾಗಿದ್ದರೆ ಅವರೇ ಕಪ್ ಹಿಡಿದುಕೊಂಡು ಹೋಗಿಬಿಡುತ್ತಿದ್ದರು. ಸಿದ್ಧರಾಮಯ್ಯನವರು, ಕೆ.ಎಸ್.ಸಿ.ಎ. ಹಾಗೂ ಆರ್.ಸಿ.ಬಿ. ಎಲ್ಲರೂ ಆ ತಕ್ಷಣ ಟ್ವೀಟ್ ಮಾಡಿರುವುದು ಕಂಡು ಬಂದಿದೆ. ಆತುರಾತುರವಾಗಿ ಸಂಭ್ರಮಾಚರಣೆಗೆ ಪೊಲೀಸ್ ಇಲಾಖೆ ನಿರಾಕರಿಸಿತ್ತು. ಅಷ್ಟು ಬೇಗ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಆಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳೇ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಪತ್ರ ಕೂಡ ಬರೆದಿದ್ದಾರೆ. ಆತುರದಲ್ಲಿ ಕಾರ್ಯಕ್ರಮ ಬೇಡ ಎಂದು ಹೇಳಿದ್ದಾರೆ. ವಿಧಾನಸೌಧ ಹಾಗೂ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಲಕ್ಷ, ಲಕ್ಷ ಜನರು ಬರ್ತಾರೆಂದು ಹೇಳಲಾಗಿತ್ತು. ಭದ್ರತೆ ನೀಡಲು ಆಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ ಪುಕ್ಷಟೆ ಪ್ರಚಾರ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿದೆ. ಆರ್.ಸಿ.ಬಿ. ಹಾಗೂ ಕೆ.ಎಸ್.ಸಿ.ಎ. ಗೆ ಉಪಮುಖ್ಯಮಂತ್ರಿ ಶಿವಕುಮಾರ್ ಭರವಸೆ ನೀಡಿ ಕಾರ್ಯಕ್ರಮ ಮಾಡಿಸಿದ್ದಾರೆ. ವಿಧಾನಸೌಧದ ಮುಂದೆ ಯಾವುದೇ ದುರ್ಘಟನೆ ನಡೆದಿಲ್ಲ ಎಂದು ಈಗ ಸಿದ್ಧರಾಮಯ್ಯ ಹೇಳುತ್ತಿದ್ದಾರೆ. ಅಲ್ಲಿ ಡಿಸಿಎಂ ಶಿವಕುಮಾರ್ ಅವರ ಮೇಲೆ ಹೇರಲು ಸಿಎಂ ಯೋಜಿಸಿರುವುದು ಸ್ಪಷ್ಟವಾಗಿದೆ. ಇವರ ನಡುವಿನ ತಿಕ್ಕಾಟದಲ್ಲಿ 11 ಮುಗ್ಧ ಜನರ ಪ್ರಾಣ ಹೋಗಿದೆ. ರಾಜ್ಯ ಸರ್ಕಾರದ ಕ್ರಿಮಿನಲ್ ಅಫೆನ್ಸ್ ನಿಂದಾಗಿ ಜನರು ಪದರಾಣ ಕಳೆದುಕೊಂಡಿದ್ದಾರೆ. ಮೊಮ್ಮಗನ ಜೀವ ಹೋಗಿದ್ದಕ್ಕೆ ತುಮಕೂರಿನಲ್ಲಿ ಅಜ್ಜಿ ನಿನ್ನೆ ಪ್ರಾಣ ಬಿಟ್ಟಿದ್ದಾರೆ. ಕಾಲ್ತುಳಿಕ್ಕೆ ಅಭಿಮಾನಿಗಳು ಬಲಿ – ಕೈ ತುಳಿತಕ್ಕೆ ಪೊಲೀಸರು ಬಲಿಯಾಗಿದ್ದಾರೆ. ಈ ಸಾಲು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಬಲಿಪಶುವಾಗಿದೆ. ರಾಜ್ಯ ಉಚ್ಛ ನ್ಯಾಯಾಲಯ ಸುಮೋಟೋ ಕೇಸು ದಾಖಲಿಸಿಕೊಂಡ ಬಳಿಕ ಎಚ್ಚೆತ್ತುಕೊಂಡಿದ್ದಾರೆ. ಈ ಮೂಲಕ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.
ಸಿದ್ಧರಾಮಯ್ಯರ ಕುಟುಂಬ ಸದಸ್ಯರು ಕ್ರಿಕೆಟ್ ಆಟಗಾರರ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಆದರೆ ಜನರಿಗೆ, ಅಭಿಮಾನಿಗಳಿಗೆ ವಿರಾಟ್ ಕೋಹ್ಲಿ ಕಾಣಲೇ ಇಲ್ಲ. ಸಿದ್ಧರಾಮಯ್ಯನವರೆ ನೀವು ಪಾಪದ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿದೆ. ಅತ್ತ ಕ್ರೀಡಾಂಗಣದಲ್ಲಿ ಪ್ರಾಣ ಕಳೆದುಕೊಂಡಿದ್ದರೆ, ಇತ್ತ ಸಿದ್ಧರಾಮಯ್ಯನವರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅಲ್ಲಿ ಕಾಲ್ತುಳಿತ ಆಗಿದ್ದರೂ ಸಿದ್ಧರಾಮಯ್ಯ ಮಸಾಲೆದೋಸೆ ತಿನ್ನಲು ಹೋಗಿದ್ದರು. ಅವರಿಗೆ ಕಾಲ್ತುಳಿತವಾಗಿರುವುದು ಸಂಜೆ 5 ಗಂಟೆಯವರೆಗೂ ಗೊತ್ತೇ ಇರಲಿಲ್ಲ. ಇವರಿಗೆ ಮಸಾಲೆ ದೋಸೆಯೇ ಮುಖ್ಯವಾಗಿತ್ತು. ಈ ನಾಡಿನ ಜನರ ಭಾವನೆಯನ್ನು ತಿಳಿಸುವ ಉದ್ಧೇಶದಿಂದ ಸಿದ್ಧರಾಮಯ್ಯನವರಿಗೆ ಪತ್ರ ಬರೆದಿದ್ದೆನೆ. ರಾಜ್ಯ ಸರ್ಕಾರಕ್ಕೆ ಕಾಲ್ತುಳಿತದ ಪ್ರಕರಣದ ಬಗ್ಗೆ ಗಮನ ಸೆಳೆಯಲು ಪತ್ರ ಬರೆದಿದ್ದೆನೆ.
ಸಿಎಂ ಹಾಗೂ ಡಿಸಿಎಂ ಗೆ ಇಂದು ದೆಹಲಿಗೆ ಕರೆಸಿಕೊಂಡಿದ್ದಾರೆ. ನಾಯಿ ಬಾಲ ಅಲ್ಲಾಡಿಸಬೇಕು. ಆದರೆ ದೆಹಲಿ ನಾಯಕರನ್ನು ಇವರೇ ಬಾಲದ ರೀತಿಯಲ್ಲಿ ಅಲ್ಲಾಡಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಿಳಿಸಬೇಕು.ಜನಪ್ರಿಯತೆಯ ಹುಚ್ಚು ಕುದುರೆ ಏರಿ ಸಿದ್ಧರಾಮಯ್ಯ, ಶಿವಕುಮಾರ್ ಓಡುತ್ತಿದ್ದಾರೆ.ಹೀಗಾಗಿ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಜೂ. 13 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಅಂದು ಸಿಎಂ ಮನೆ ಮುತ್ತಿಗೆ ಹಾಕುವ ಕೆಲಸ ಮಾಡುತ್ತಿದ್ದೆವೆ. ಜೂ. 16 ರಂದು ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಅವರು ರಾಜಿನಾಮೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲಿಸಲ್ಲ.ಪೊಲೀಸರ ವೈಫಲ್ಯವೇ ರಾಜ್ಯ ಸರ್ಕಾರದ ವೈಫಲ್ಯ. ಈ ಪ್ರಕರಣ ಸಂಬಂಧ ಎ1 ಸಿದ್ಧರಾಮಯ್ಯ, ಎ2 ಡಿ.ಕೆ. ಶಿವಕುಮಾರ್, ಬಳಿಕ ಆರ್.ಸಿ.ಬಿ., ಕೆ.ಎಸ್.ಸಿ.ಎ., ಡಿಎನ್ ಎ ಬರುತ್ತದೆ. ಇದರಲ್ಲಿ ಎ 1 ಆರೋಪಿ ಸಿದ್ಧರಾಮಯ್ಯನವರೇ ನೇರ ಹೋಣೆ. ನನಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಹ್ವಾನವೇ ಇರಲಿಲ್ಲ ಎಂದುಸಿದ್ಧರಾಮಯ್ಯ ಈಗ ಹೇಳುತ್ತಿದ್ದಾರೆ.ಅವರು ಬರಲ್ಲ ಎಂದು ಹೇಳಿಯೇ ಡಿ.ಕೆ. ಶಿವಕುಮಾರ್ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಅಸಯೋಜಿಸಿದ್ದರು. ಸಿದ್ಧರಾಮಯ್ಯನವರು, ನನಗೂ ಶಿವಕುಮಾರ್ ಗೂ ಸಂಬಂಧವಿಲ್ಲ ಎಂದು ಹೇಳಲಿ ಎಂದು ಕಾಮಗ್ರೆಸ್ ಸರ್ಕಾರದ ವಿರುದ್ಧ ಬಿವೈ ವಿ ಗುಡುಗಿದ್ದಾರೆ.