
ಹಾಸನ್ : ಹಾಸನ್ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗಂಡಸಿ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಬರ್ಬರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಇನ್ಸೂರೆನ್ಸ್ ಹಣಕ್ಕಾಗಿ ನಡೆದ ಈ ಕ್ರೂರ ಕೃತ್ಯದಲ್ಲಿ, ಮುನಿಸ್ವಾಮಿಗೌಡ ಎನ್ನುವ ವ್ಯಕ್ತಿ ಮೂರು ಬಾರಿ ಹತ್ಯೆಗೆ ಯತ್ನಿಸಿದರೂ ವಿಫಲಗೊಂಡು, ನಾಲ್ಕನೇ ಪ್ರಯತ್ನದಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಪ್ರಾರಂಭದಲ್ಲಿ ಅಪಘಾತ ಎಂದು ಬಿಂಬಿಸಲು ಪ್ಲಾನ್ ಮಾಡಿದ್ದರೂ, ಮೊದಲ ಮೂರು ಪ್ರಯತ್ನಗಳು ವಿಫಲವಾಗಿದ್ದು, ನಾಲ್ಕನೇ ಬಾರಿಗೆ ಯಶಸ್ಸು ಕಂಡಿದ್ದಾರೆ.
ಈ ಘಟನೆಯ ಸಂಬಂಧ ಹಾಸನ್ ಜಿಲ್ಲಾ ಪೊಲೀಸರು ಮುನಿಸ್ವಾಮಿಗೌಡ ಹಾಗೂ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಆಗಸ್ಟ್ 13ರ ಮುಂಜಾನೆ ನಡೆದಿದೆ. ಹತ್ಯೆಯ ನಂತರ, ಮುನಿಸ್ವಾಮಿಗೌಡ ಅಪಘಾತ ಎಂದು ಬಿಂಬಿಸುವ ನಾಟಕವನ್ನಾಡಿ, ಮೃತದೇಹವನ್ನು ಪತ್ನಿ ಶಿಲ್ಪರಾಣಿಯ ಸಹಕಾರದಿಂದ ವಶಕ್ಕೆ ಪಡೆದಿದ್ದಾನೆ.
ಈ ಘಟನೆಯಲ್ಲಿ ಪತ್ನಿಯ ಸಹಭಾಗಿತ್ವವಿರುವುದು ಬಹಿರಂಗವಾಗುತ್ತಿದ್ದಂತೆ, ಶಿಲ್ಪರಾಣಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ಸೂರೆನ್ಸ್ ಹಣಕ್ಕಾಗಿ ನಡೆದ ಈ ಕೃತ್ಯ ಹಾಸನ್ ಜಿಲ್ಲೆ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.