Ashwaveega News 24×7 ಮಾರ್ಚ್ 09 – 2026 : ಬೆಂಗಳೂರು: ಬಿಜೆಪಿ ನಾಯಕ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ K. Annamalai ಅವರು ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ ಸಂದರ್ಭವನ್ನು ನೆನಪಿಸಿಕೊಂಡು ಮಹತ್ವದ ಹೇಳಿಕೆ ನೀಡಿದ್ದಾರೆ.
ಒಂದು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ಐಪಿಎಸ್ ಹುದ್ದೆ ತೊರೆದ ಕೊನೆಯ ದಿನ ನಡೆದ ವಿಚಿತ್ರ ಘಟನೆ ಬಗ್ಗೆ ವಿವರಿಸಿದರು. ಅಂದಿನ ಕರ್ನಾಟಕ ಮುಖ್ಯಮಂತ್ರಿ H. D. Kumaraswamy ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದಾಗ, “ಯಾಕೆ ರಾಜೀನಾಮೆ ಕೊಡುತ್ತಿದ್ದೀರಿ ?” ಎಂದು ಕೇಳಿದರಂತೆ.
ಅದಕ್ಕೆ ಉತ್ತರಿಸಿದ ಅಣ್ಣಾಮಲೈ, “ಸಮಾಜದಲ್ಲಿ ಸಕಾರಾತ್ಮಕವಾಗಿ ಕೆಲಸ ಮಾಡುವ ಹಂಬಲದಿಂದ ರಾಜೀನಾಮೆ ಕೊಡುತ್ತಿದ್ದೇನೆ ” ಎಂದು ತಿಳಿಸಿದ್ದಾಗಿ ಹೇಳಿದರು . ಆಗ ಸಿಎಂ, “ ಒಂದು ದಿನ ಸಮಯ ತೆಗೆದುಕೊಳ್ಳಿ , ಮರುಚಿಂತನೆ ಮಾಡಿ” ಎಂದು ಸಲಹೆ ನೀಡಿದರಂತೆ.
ಆದರೆ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇನೆ ಎಂದು ಅಣ್ಣಾಮಲೈ ಸ್ಪಷ್ಟಪಡಿಸಿದ್ದಾಗಿ ತಿಳಿಸಿದ್ದಾರೆ. ಅದಾಗ ಸಿಎಂ, “ನೀವು ಈಗ ರಾಜೀನಾಮೆ ನೀಡಿದರೆ ಜನರು ನಾನು ಕೆಟ್ಟ ಬಾಸ್ ಎಂದು ಭಾವಿಸಬಹುದು ಅಥವಾ ರಾಜಕಾರಣಿಗಳು ನಿಮ್ಮ ಮೇಲೆ ಒತ್ತಡ ಹಾಕಿದ್ದಾರೆ ಎಂದು ಭಾವಿಸಬಹುದು. ಆದ್ದರಿಂದ ಒಂದು ವಿಡಿಯೋ ರೆಕಾರ್ಡ್ ಮಾಡಿ ಕೊಡಿ,” ಎಂದು ಕೇಳಿಕೊಂಡರಂತೆ.
ಸಿಎಂ ಮಾತಿನಂತೆ ಅನಿವಾರ್ಯವಾಗಿ ತಮ್ಮ ಪೊಲೀಸ್ ಸಮವಸ್ತ್ರದಲ್ಲೇ ಒಂದು ವಿಡಿಯೋ ರೆಕಾರ್ಡ್ ಮಾಡಿಕೊಟ್ಟಿದ್ದಾಗಿ ಅಣ್ಣಾಮಲೈ ಹೇಳಿದ್ದಾರೆ. ಆ ವಿಡಿಯೋದಲ್ಲಿ “ಮುಖ್ಯಮಂತ್ರಿಗಳು ಮತ್ತು ರಾಜಕಾರಣಿಗಳು ಒಳ್ಳೆಯವರು, ನಾನು ಸ್ವಇಚ್ಛೆಯಿಂದ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಹೇಳಿದ್ದಾಗಿ ಅವರು ವಿವರಿಸಿದರು.
ಗಮನಾರ್ಹವಾಗಿ, K. Annamalai ಅವರು 2019ರ ಮೇ ತಿಂಗಳಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆಗ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಮುಖ್ಯಮಂತ್ರಿ ಆಗಿ H. D. Kumaraswamy ಕಾರ್ಯನಿರ್ವಹಿಸುತ್ತಿದ್ದರು.
