
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎಲ್ಲೆ ನೋಡಿದ್ರೂ ಪವರ್ ಕಟ್…. ಕರೆಂಟ್ ಇಲ್ಲದೆ ಸಾರ್ವಜನಿಕರು ಪರಾದಡುವಂತಾಗಿದೆ. ಒಂದು ಚಿಕ್ಕ ಮಳೆ ಬಂದ್ರೆ ಸಾಕು ಕೆಲವೊಂದು ಭಾಗಗಳಲ್ಲಿ ಕರೆಂಟ್ ಇಲ್ದೆ, ಕತ್ತಲಲ್ಲಿ ಜೀವನ ನಡೆಸುವಂತಾಗಿದೆ… ಹೀಗೆ ಸಾರ್ವಜನಿಕರು ಕರೆಂಟ್ ಇಲ್ದೆ ಆಕ್ರೊಶಗೊಂಡು ಕಾರವಾರ ರೋಡ್ ಬಂದ್ ಮಾಡಿ ವಿದ್ಯುತ್ ಸರಬರಾಜು ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿಯ ಕಾರವಾರ ರೋಡ್, ಗೋಕುಲ ದಾಮ, ಪಂಜಾರ ಪೋಳ, ತಿಮ್ಮಸಾಗರ ರೋಡ್, ಹೀಗೆ ಸೇರಿದಂತೆ ಹಳೇ ಹುಬ್ಬಳ್ಳಿಯ ಕೆಲವೊಂದು ಭಾಗಗಳಲ್ಲಿ ಸುಮಾರು ಐದಾರು ದಿನಗಳಿಂದ ಕರೆಂಟ್ ಇಲ್ದೆ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಪವರ್ ಇಲದೆ ಕಾರಣ ಕುಡಿವ ನೀರು ಇಲ್ಲಾ, ಮನೆಯಲ್ಲಿ ಚಿಕ್ಕ ಮಕ್ಕಳು ಮಲಗಲು ಆಗುತ್ತಿಲ್ಲ, ಈ ಕಾರವಾರ ರಸ್ತೆಯಲ್ಲಿ ಕಂಪನಿಗಳು, ಪೆಟ್ರೋಲ್ ಬಂಕ್ಗಳಿವೆ ಹೀಗೆ ಐದಾರು ದಿನಗಳಿಂದ ವಿದ್ಯುತ್ ಕಟ್ ಆಗಿದ್ದರಿಂದ ಯಾವುದೇ ರೀತಿಯ ವ್ಯಾಪಾರ ಕೂಡ ಆಗುತ್ತಿಲ್ಲವಂತೆ. ಈ ಸಮಸ್ಯೆ ಬಗ್ಗೆ ಹೇಳಲು ಸಾರ್ವಜನಿಕರು ಹೋದ್ರೆ ಕೆಇಬಿ ಅಧಿಕಾರಿಗಳ ಕ್ಯಾರೆ ಎನ್ನುತ್ತಿಲ್ವಂತೆ. ಇಂದು ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳು ಸೇರಿಕೊಂಡು ರಸ್ತೆ ಬಂದ್ ಮಾಡಿ ವಿದ್ಯುತ್ ಸರಬರಾಜು ಕಚೇರಿಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
