
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ನಿಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ. ಮೊದಲನೇ ಜನರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಅದರಲ್ಲಿ ಈ ತರಹದ ಘಟನೆಗಳಿಂದ ಜನರು ಇನ್ನಷ್ಟು ಅಸಾಮಾಧಾನ ಉಂಟಾಗುತ್ತದೆ. ನಿಟ್ಟೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಔಷಧಿ ವಿತರಣೆಯಲ್ಲಿ ಲೋಪ ಅಂದರೆ ವಾಯಿದೆ(Experid) ಮುಗಿದ ಔಷಧಿಗಳನ್ನು ಆಸ್ಪತ್ರೆಯ ರೋಗಿಗಳಿಗೆ ನೀಡುತ್ತಿದ್ದಾರೆ.
ಇದಲ್ಲದೇ ಸ್ವಚ್ಛತೆ ಇಲ್ಲದ ಕೊಠಡಿಗಳು. ಶೌಚಾಲಯಗಳು, ವೈದ್ಯರ ಕೊಠಡಿಗಳು ವರ್ಷಗಳ ಹಿಂದೆಯೇ ವಾಯಿದೆ ಮುಗಿದಿರುವ 2-3 ಸಾವಿರ ಮೌಲ್ಯದಷ್ಟು ಔಷಧ, ಮಾತ್ರೆಗಳು ಪತ್ತೆಯಾಗಿವೆ.ಅದರಲ್ಲೂ ಹೆಚ್ಚಾಗಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡುವ ಮಾತ್ರ ಔಷಧಗಳು ಇವೆ.ಜನಪ್ರತಿನಿಧಿಗಳ ಭೇಟಿ ವೇಳೆ ತೀವ್ರ ಆತಂಕಕಾರಿ ವಿಷಯ ತಿಳಿದಬಂದ ನಂತರ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಯ ತಪ್ಪು ಎಸಗಿದವರ ಮೇಲೆ ತೀವ್ರಕ್ರಮ ಕೈಗೊಳ್ಳಬೇಕೆಂದು ಮತ್ತು ಅಧಿಕಾರಿಗಳು ಸಾರ್ವಜನಿಕರ ಆರೋಗ್ಯದ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ತಿಳಿಸಿದರು.
ಇಷ್ಟೇ ಅಲ್ಲದೇ ಮೆಡಿಕಲ್ ಸ್ಟೋರ್ಗಳು ಮತ್ತು ಆಸ್ಪತ್ರೆಯ ಫಾರ್ಮಸಿಗಳಲ್ಲಿ ಔಷಧಿ ಪೂರೈಕೆಗಳ ನಿಯಮಿತ ತಪಾಸಣೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಎಲ್ಲಾ ವಿಚಾರವಾಗಿ ಆರೋಗ್ಯಾಧಿಕಾರಿಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಅಥವಾ ಸರ್ಕಾರದಿಂದ ನಡೆಸಲ್ಪಡುವ ಆಸ್ಪತ್ರೆಗಳ ಮೇಲೆ ತಪಾಸಣೆ ನಡೆಸಿ ಒಂದು ನಿರ್ಧಾರ ತೆಗೆದುಕೊಳ್ಳಬೇಕು.