
ಸಾಲು ಸಾಲು ಹಬ್ಬಗಳು ಸಮೀಪಿಸುತ್ತಿರುವಂತೆ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಗೌರಿ ಗಣೇಶ್ ಹಬ್ಬಕ್ಕೆ ಊರಿಗೆ ತೆರಳುವವರಿಗೆ ರೈಲ್ವೆ ಇಲಾಖೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರಮುಖ ರೈಲುಗಳ ದಟ್ಟಣೆ ಉಂಟಾಗಿದ್ದು, ಈ ಪರಿಸ್ಥಿತಿ ನಿರ್ವಹಿಸಲು ಹಾಗೂ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ವಿವಿಧ ಮಾರ್ಗಗಳಲ್ಲಿ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಗಣೇಶ್ ಚತುರ್ಥಿ, ದಸರಾ, ಮತ್ತು ದೀಪಾವಳಿ ಹಬ್ಬಗಳನ್ನು ಹೊಕ್ಕು ಈ ರೈಲುಗಳು ಸಂಚರಿಸಲಿವೆ, ಇದು ಪ್ರಯಾಣಿಕರ ಅನುಕೂಲತೆಯ ಪ್ರಮುಖ ಹೆಜ್ಜೆ ಎಂದು ತಿಳಿಸಲಾಗಿದೆ.