
ಕಲಬುರಗಿ : ಕಲಬುರಗಿ ನಗರ ಹೊರವಲಯದ ಕೊಟನೂರು (ಡಿ) ಗ್ರಾಮದಲ್ಲಿ 10 ವರ್ಷದ ಶೇಖರ್ ಎಂಬ ಬಾಲಕ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದು, ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ.
ನಾಲ್ಕನೇ ತರಗತಿ ಓದುತ್ತಿದ್ದ ಶೇಖರ್ ಮನೆ ಬಳಿ ಆಟವಾಡುತ್ತ ನಾಪತ್ತೆಯಾಗಿದ್ದು, ಪೋಷಕರು ಎಲ್ಲೆಡೆ ಹುಡುಕಾಡಿದರು ಸಹ ಶೇಖರ್ ಪತ್ತೆಯಾಗಿರಲಿಲ್ಲ. ಆದರೆ ಇಂದು ಮನೆ ಬಳಿ ಖಾಲಿ ನಿವೇಶನದಲ್ಲಿ ಇರೋ ಟಾಯ್ಲೆಟ್ ಚೆಂಬರನಲ್ಲಿ ಮೃತದೇಹ ಪತ್ತೆಯಾಗಿದ್ದು, ಘಟನಾ ಸ್ಥಳಕ್ಕೆ ವಿಶ್ವವಿದಾಲಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : https://ashwaveega.com/the-bridge-was-washed-away-due-to-heavy-rains-for-four-days/