
ಯಾದಗಿರಿ : ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದ ಬಾಣಂತಿ ಸಾವು, ಹೆರಿಗೆ ನೋವು ಕಾಣಿಸುವ ಮೊದಲು, ಬ್ಲಡ್ ರಿಪೋರ್ಟ್ ಬರುವ ಮೊದಲೇ ವೈದ್ಯರು ಹೆರಿಗೆ ಮಾಡಿದ್ದು, ಚಿಕಿತ್ಸೆ ಫಲಿಸದೇ ಭವಾನಿ ಮೃತಪಟ್ಟಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸೆಪ್ಟೆಂಬರ್ 2 ರಂದು ವೈದ್ಯರ ನಿಷ್ಕಾಳಜಿ ಚಿಕಿತ್ಸೆಯಿಂದ ಬಾಣಂತಿ ಸಾವಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೆರಿಗೆ ನೋವು, ಬ್ಲಡ್ ರಿಪೋರ್ಟ್ ಬರುವ ಮೊದಲೇ ಬಾಣಂತಿಗೆ ವೈದ್ಯರು ಹೆರಿಗೆ ಮಾಡಿದ್ದು, ಇದರಿಂದ ಹೆರಿಗೆಯಾದ ಒಂದು ಗಂಟೆ ಬಳಿಕ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಳಾಗಿದ್ದು, ತಕ್ಷಣವೇ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯೆ ಸೂಚಿಸಿದ್ದಾರೆ.
ಇನ್ನೂ ನಂತರ ಬಂದ ಬ್ಲಡ್ ರಿಪೋರ್ಟ್ ನಲ್ಲಿ ಬಾಣಂತಿಗೆ ಕಾಮಾಲೆ ಇರೋದು ಗೊತ್ತಾಗಿದ್ದು, ಬಾಣಂತಿ ಸಾವಿಗೆ ವೈದ್ಯ ನಿರ್ಲಕ್ಷ್ಯವೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆ ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯೆ ಸರೋಜಾ ಸ್ವತಃ ತಾವೇ ಬಂದು ಬಾಣಂತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟೇ ಅಲ್ಲಾದೆ ಈ ಆಪರೇಷನ್ ಪೇಲ್ ಆಗಿದೆ ಮತ್ತೊಮ್ಮೆ ಆಪರೇಷನ್ ಮಾಡಬೇಕೆಂದ ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಆಪರೇಷನ್ ಮುಗಿಯೋವರೆಗೆ ವೈದ್ಯೆ ಸರೋಜಾ ಅಲ್ಲಿಯೇ ಇದ್ರು.
ಮತ್ತೊಂದು ಆಪರೇಷನ್ ಗೆ ಖಾಸಗಿ ಆಸ್ಪತ್ರೆ ವೈದ್ಯರು ಹತ್ತು ಲಕ್ಷ ಬಿಲ್ ಮಾಡಿದ್ದು, ಆ ಬಿಲ್ ಪಾವತಿಸಿದ್ರೂ ಆರೋಗ್ಯ ಚೇತರಿಕೆ ಕಂಡಿಲ್ಲ. ಬಳಿಕ ಬಾಣಂತಿಗೆ ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸೂಚಿಸಲಾಗಿತ್ತು, ಸದ್ಯ ಚಿಕಿತ್ಸೆ ಫಲಕಾರಿಯಾಗದೇ ಬಾಣಂತಿ ಕೊನೆಯುಸಿರೆಳೆದಿದ್ದಾಳೆ. ಇನ್ನೂ ಕುಟುಂಬಸ್ಥರು ಶಹಾಪುರ ಸರ್ಕಾರಿ ಆಸ್ಪತ್ರೆ ವೈದ್ಯೆ ಸರೋಜಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕೂಡಲೇ ಸೇವೆಯಿಂದ ಸಸ್ಪೆಂಡ್ ಮಾಡಿ, ಆಸ್ಪತ್ರೆ ಬಿಲ್ ಪಾವತಿಸುವಂತೆ ಒತ್ತಾಯ ಮಡಿದ್ದಾರೆ.
ಇದನ್ನೂ ಓದಿ : https://ashwaveega.com/as-soon-as-the-cm-dcm-comes-the-banner-of-the-next-cm-created-a-stir/