
ಧಾರವಾಡ : ಜಿಲ್ಲೆಯಲ್ಲಿ ಸತತವಾಗಿ ಭಾರಿ ಮಳೆ ಸುರಿಯುತ್ತಿದ್ದು, ಮಳೆಗೆ ರಾಷ್ಟ್ರೀಯ ಹೆದ್ದಾರಿ 4 ಕೊಚ್ಚಿ ಹೋಗಿದೆ.
ಧಾರವಾಡದಲ್ಲಿ ಸತತವಾಗಿ ಭಾರಿ ಮಳೆ ಸುರಿಯುತ್ತಿರುವ ಕಾರಣ, ರಮ್ಯ ರೆಸಿಡೆನ್ಸಿಯ ಬಳಿ ರಸ್ತೆ ಅವಾಂತರ ನಡೆದಿದೆ. ಹುಬ್ಬಳ್ಳಿಯಿಂದ ಧಾರವಾಡದವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸದ್ಯ ರಸ್ತೆ ಕಳಪೆ ಕಾಮಗಾರಿ ಇರೋದರಿಂದ ಎಲ್ಲೆಂದರಲ್ಲಿ ಕೊಚ್ಚಿ ಹೋಗುತ್ತಿರುವ ರಸ್ತೆಗಳು ಇದರಿಂದ ವಾಹನ ಸವಾರರು ಪರದಾಡು ವನಂತೆ ಆಗಿದೆ.
ಹೌದು ಪ್ರತಿಸಾರಿ ಮಳೆಗೆ ವಾಹನ ಸವಾರರ ಪರದಾಡುತ್ತಿದ್ದು, ಕಳಪೆ ಕಾಮಗಾರಿಯಿಂದ ಜನರು ಬೇಸತ್ತಿದ್ದಾರೆ. ಸದ್ಯ ನಂದಿ ಹೈವೆ ಅವರು ಟೋಲ್ ಶುಲ್ಕವನ್ನ ಸ್ಥಗಿತ ಗೊಳಿಸಿರುವ ಹಿನ್ನಲೆ, ವಾಹನ ಸವಾರರು ಬೇಕಾ ಬಿಟ್ಟಿ ಪ್ರಯಾಣ ಮಾಡುತ್ತಿದ್ದು, ಎಲ್ಲೆಂದರಲ್ಲಿ ಅಪಘಾತಗಳು ನಡೆಯುತ್ತಿವೆ. ಇಷ್ಟೆ ಅಲ್ಲಾದೆ 24 ಕೀ ಮೀ ವರೆಗೂ ರಸ್ತೆ ನಿರ್ಮಾಣ ವಾಗುತ್ತಿದ್ದು, ಸದ್ಯ ಮಳೆ ನೀರಿಗೆ ವಾಹನ ಸವಾರರ ಪರದಾಡುತ್ತಿದ್ದಾರೆ.
ಇದನ್ನೂ ಓದಿ : https://ashwaveega.com/vijayapura-rain-crocodile-came-to-the-town-through-drain/