
ಹಾವೇರಿ : ಜಿಲ್ಲೆಯಲ್ಲಿ ಮತ್ತೆ ತಡರಾತ್ರಿ ವರ್ಣನ ಅಬ್ಬರ ಹೆಚ್ಚಾಗಿದ್ದು, ರಾತ್ರಿ ಇಡೀ ಬಿಟ್ಟು ಬಿಡದೆ ಸುರಿದ ಮಳೆಗೆ ಬೆಳೆ ನಾಶವಾಗಿದೆ.
ಹೌದು ಬಾರಿ ಮಳೆಗೆ ದಿನದಿಂದ ದಿನಕ್ಕೆ ಬೆಳೆ ನಾಶವಾಗುತ್ತಿದ್ದು, ಅತಿ ಹೆಚ್ಚು ಮಳೆಯಿಂದ ಫಸಲಿಗೆ ಬಂದ ಬೆಳೆಗಳು, ತೇವಾಂಶ ಹೆಚ್ಚಾಗಿ ಮೊಳಕೆ ಒಡೆಯುತ್ತಿವೆ ಇದರಿಂದ ರೈತ ಆತಂಕಗೊಂಡಿದ್ದಾರೆ. ಅತಿ ಹೆಚ್ಚು ಮಳೆಯಿಂದ ರಸ್ತೆ ಮೂಲಕ ನೀರು ಹರಿದು ಹೊಲಗಳಿಗೆ ಸೇರುತ್ತಿದ್ದು, ಹೊಲಗಳಲ್ಲಿ ಎಲ್ಲಿ ನೋಡಿದರಲ್ಲೂ ನೀರು ತುಂಬಿ ಕೊಂಡಿದೆ. ಇದರಿಂದ ಭೂಮಿ ತೇವಾಂಶ ಹೆಚ್ಚಾಗಿ ಬೆಳೆಗಳು ಎಲ್ಲವೂ ಸಂಪೂರ್ಣವಾಗಿ ನೆಲ ಕಚ್ಚಿವೆ.