
ಯಲಂಕ : ಬೆಂಗಳೂರು ನಗರದ ಯಲಹಂಕ ಸುತ್ತಾಮುತ್ತಾ ಭಾರಿ ಮಳೆ ಆಗುತ್ತಿದ್ದು, ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಯಲಹಂಕ ತಗ್ಗುಪ್ರದೇಶಗಳು ಜಲಾವೃತ ಆಗಿದೆ. ಯಲಹಂಕ ಕೆರೆಕೋಡಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಲದಿಗ್ಭಂಧನ ಆಗಿದ್ದು, ಯಲಹಂಕ ರೈತರ ಸಂತೆ ಸುತ್ತಮುತ್ತಲ ಪ್ರದೇಶಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಗಿದೆ. ಮುಖ್ಯವಾಗಿ ಜಕ್ಕೂರು ರಸ್ತೆ ಕೆರೆಯಂತಾಗಿದ್ದು, ಪ್ರಯಾಣಿಸಲು ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಇನ್ನೂ ಬೈಕ್, ಕಾರು, ಟ್ಯಾಕ್ಸಿ ಕೆಟ್ಟು ನಿಂತು ಸಮಸ್ಯೆ ಎದುರಿಸುವಂತಾಗಿದ್ದು, ಕೆಟ್ಟುನಿಂತ ಬೈಕ್ಗಳನ್ನ ಕೆರೆಯಂತಾದ ರಸ್ತೆಯಲ್ಲೆ ವಾಹನ ಸವಾರರು ತಳ್ಳಿದ್ದಾರೆ. ಇನ್ನೂ ಭಾರಿ ಮಳೆಯಿಂದ ಸಂಭವಿಸಿದ ಅವಾಂತರದಿಂದ ಜನರ ಪರದಾಟ ಕೇಳುವವರಿಲ್ಲ ಎಂಬಂತಾಗಿದೆ. ಇದೆ ವೇಳೆ ಒಂದು ಗಂಟೆಕಾಲ ಯಲಹಂಕ ಜಕ್ಕೂರು ರಸ್ತೆಯಲ್ಲೇ ನೀರು ನಿಂತಿದ್ದು, ಜೋರು ಮಳೆ ನೀರಿಂದ ರಾಜಕಾಲುವೆಯಲ್ಲಿ ಕಸ ತುಂಬಿಕೊಂಡು ಸಮಸ್ಯೆ ಎದುರಾಗಿದೆ. ಜಕ್ಕೂರು ರಸ್ತೆಯ ಸೆಂಚುರಿ ಅಪಾರ್ಟ್ಮೆಂಟ್ ಬಳಿ ರಾಜಕಾಲುವೆ ಉಕ್ಕಿಹರಿದು ತೀವ್ರ ಸಮಸ್ಯೆ ಎದುರಾಗಿದೆ.
ಅಷ್ಟೆ ಅಲ್ಲಾದೆ ಯಲಹಂಕದ ಜಕ್ಕೂರು ರಸ್ತೆ ಸುರಭಿ ಲೇಔಟ್ಗೆ ನೀರು ನುಗ್ಗಿ ತೊಂದರೆ ಆಗಿದ್ದು, ಸುರಭಿ ಬಡಾವಣೆ ಸರ್.ಎಂ.ವಿ ರಸ್ತೆಯ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. BWSSBಯ ಶುದ್ಧೀಕರಣ ಘಟಕ ರಸ್ತೆಯು ಸುಮಾರು ಅರ್ದ ಕಿ.ಮೀ ಜಲಾವೃತ ಆಗಿದೆ.ಯಲಹಂಕ, ಯಲಹಂಕ ಉಪನಗರ ಸುತ್ತಾಮುತ್ತಾ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ, ಪ್ರಯಾಣಿಕರು ಮತ್ತು ಜನರಿಗೆ ತೀವ್ರ ತೊಂದರೆ ಉಂಟಾಗಿದೆ.