
ಬೆಂಗಳೂರು : ಬಾಬುಸಪಾಳ್ಯ ಕಟ್ಟಡ ದುರಂತ ಬಳಿಕ ಪಾಲಿಕೆಗಳು ಅಲರ್ಟ್ ಆದಿದ್ದು, ಬೀಳುವ ಹಂತದಲ್ಲಿರೋ ಮತ್ತೊಂದು ಅನಧಿಕೃತ ಕಟ್ಟಡ ತೆರವು ಮಾಡಿದ್ದಾರೆ.
ಹೌದು ನಂಜಪ್ಪ ಗಾರ್ಡನ್ ನಲ್ಲಿ ಅನಧಿಕೃತ ಕಟ್ಟಡವನ್ನು ತೆರವು ಮಾಡಿದ್ದು, ಮಹದೇವಪುರ ವಲಯದ ಹೊರಮಾವಿನ ನಂಜಪ್ಪ ಗಾರ್ಡನ್ ಬಳಿ ಪುಟ್ಟಪ್ಪ ಅನ್ನೋರಿಗೆ ಸೇರಿದ 10×25 ಅಡಿಯಲ್ಲಿ ನಿರ್ಮಿಸಲಾಗಿದ್ದ 6 ಅಂತಸ್ತಿನ ಕಟ್ಟಡ ವಾಲಿದ್ದರಿಂದ ಪಾಲಿಕೆ ತೆರವಿಗೆ ಮುಂದಾಗಿದ್ದಾರೆ.