
ಕರ್ನಾಟಕ ತಂಡ 2025ರ ವಿಜಯ್ ಹಜಾರೆ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿದರ್ಭ ವಿರುದ್ದ ನಡೆದ ಫೈನಾಲ್ ಪಂದ್ಯದಲ್ಲಿ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಿ 384 ರನ್ ಕಲೆ ಹಾಕಿತ್ತು. ರಾಜ್ಯದ ಪರ ಸ್ಮರಣ್ ರವಿಚಂದ್ರನ್ ಶತಕ ಸಿಡಿಸಿದರೆ, ಶ್ರೀಜಿತ್ ಹಾಗೂ ಅಭಿನವ್ ಮನೋಹರ್ ಅರ್ಧಶತಕ ಬಾರಿಸಿ ದೊಡ್ಡ ಮೊತ್ತಕ್ಕೆ ಕಾರಣರಾದರು. ಬಳಿಕ ಗುರಿ ಬೆನ್ನತ್ತಿದ್ದ ವಿದರ್ಭ ತಂಡ ಆರಂಭದಿಂದಲೇ ವಿಕೆಟ್ಗಳನ್ನು ಕಳೆದುಕೊಂಡು ಅಂತಿಮವಾಗಿ 312 ರನ್ ಗಳಿಸಲಷ್ಟೇ ಶಕ್ತವಾಯಿತ್ತು.ಆ ಮೂಲಕ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆಲ್ಲುವ ಕನಸು ನೀರುಪಾಲಾಯಿತ್ತು. ವಿದರ್ಭ ಪರ ಧ್ರುವ ಶೋರೆ ಶತಕ ಸಿಡಿಸಿದರೂ ತಂಡವನ್ನು ಗೆಲ್ಲುವಿನ ದಡ ಸೇರಿಸಲ್ಲು ಸಾಧ್ಯವಾಗಲಿಲ್ಲ.