
ಐಪಿಎಲ್ ಟೂರ್ನಿ 2025ರ ಆರಂಭಕ್ಕೂ ಮುನ್ನ ಡಿಫೆಂಡಿಗ್ ಚಾಂಪಿಯನ್ ಕೆಕೆಆರ್ ತಂಡಕ್ಕೆ ಶಾಕ್ ಎದುರಾಗಿದೆ. ತಂಡದ ಗೆಲ್ಲುವಿನಲ್ಲಿ ಪಾತ್ರ ವಹಿಸಿದ್ದ ವೆಂಕಟೇಶ್ ಅಯ್ಯರ್ಗೆ ಇಂಜುರಿ ಎದುರಾಗಿದ್ದು ಕಲ್ಕತ್ತಾ ಟೀಂಗೆ ಆತಂಕ ಶುರುವಾಗಿದೆ. ರಣಜಿ ಪಂದ್ಯದಲ್ಲಿ ಉತ್ತರಪ್ರದೇಶ ಪರ ವಾಗಿ ಕೇರಳ ವಿರುದ್ದ ಬ್ಯಾಟಿಂಗ್ ಮಾಡುವ ವೇಳೆ ಏಕಾಏಕಿ ಕಾಲು ನೋವು ಕಾಣಿಸಿಕೊಂಡಿದ್ದರಿಂದ ಬ್ಯಾಟಿಂಗ್ ನಡೆಸಲು ಸಾಧ್ಯವಾಗದೇ ಕೂಡಲೇ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ನಂತರ ಉತ್ತರಪ್ರದೇಶ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಮತ್ತೆ ಬ್ಯಾಟಿಂಗ್ಗೆ ಅಯ್ಯರ್ ಆಗಮಿಸಿದರು. ನೋವಿನ ನಡುವೆಯೂ ಬ್ಯಾಟಿಂಗ್ ಮಾಡಿ ಅಂತಿಮವಾಗಿ 42 ರನ್ ಗಳಿಸಿ ಔಟಾದರು. ಅವರ ಗಾಯದ ತೀವ್ರತೆ ಬಗ್ಗೆ ಇನ್ನೂ ಅಧಿಕೃತವಾಗಿ ಮಾಹಿತಿ ಹೊರಬಂದಿಲ್. ಆದರೆ 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸುತ್ತಾರಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
