
ಅತಿಲೋಕ ಸುಂದರಿ ಬಾಲಿವುಡ್ ಬ್ಯೂಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಸರಳವಾಗಿ ಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಸದ್ಯಕ್ಕೆ ಬಾಲಿವುಡ್ನಲ್ಲಿ ಬ್ಯುಸಿಯಾಗಿರುವ ನಟಿ ತಮ್ಮ ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಿರುಪತಿಯಲ್ಲಿ ಮದುವೆಯಾಗಿ ಸರಳ ಜೀವನ ನಡೆಸುವ ಬಯಕೆ ಹೊಂದಿರುವುದಾಗಿ ಹಾಗೇ ಇಟಲಿಯ ಕ್ಯಾಪ್ರಿಯಲ್ಲಿ ಬ್ಯಾಚುಲರೇಟ್ ಪಾರ್ಟಿ ಮಾಡಿ, ಮೈಲಾಪೂರ್ನಲ್ಲಿರುವ ಶ್ರೀದೇವಿಯ ಪೂರ್ವಜರ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮವನ್ನು ಆಯೋಜಿಸುವ ಯೋಚನೆಯಲ್ಲಿದ್ದೇನೆ. ಮದುವೆ ಬಳಿಕವೂ ನಾನು ಸರಳವಾಗಿ ಪತಿಯ ತಲೆಗೆ ಎಣ್ಣೆ ಹಚ್ಚುತ್ತಾ, ಮಕ್ಕಳೊಂದಿಗೆ ಬಾಳೆ ಎಲೆಯಲ್ಲಿ ಊಟ ಮಾಡುತ್ತಾ ಜೀವನ ನಡೆಸಲು ಇಚ್ಚಿಸುತ್ತಿದೇನೆ ಎಂದು ಬಾಲಿವುಡ್ ನಟಿ ಜಾನ್ವಿ ಕಪೂರ್ ಹೇಳಿದ್ದಾರೆ.
