
ಐಪಿಎಲ್ 2025ರ ಟೂರ್ನಿಗೆ ಡಿಫೆಂಡಿಗ್ ಚಾಂಪಿಯನ್ಸ್ ಕೆಕೆಆರ್ ತಂಡ ಇನ್ನೂ ತನ್ನ ನಾಯಕನ ಹೆಸರು ಅನೌನ್ಸ್ ಮಾಡಿಲ್ಲ. ಮೂಲಗಳ ಪ್ರಕಾರ ಕೆಕೆಆರ್ ತಂಡದ ನಾಯಕನ ಹೆಸರಿಗೆ ಇಬ್ಬರು ಹೆಸರು ಪ್ರಸ್ತಾಪ ಆಗಿದ್ದು ವೆಂಕಟೇಶ್ ಅಯ್ಯರ್ ಹಾಗೂ ಅಂಜಿಕ್ಯೆ ರಹಾನೆ ಇಬ್ಬರಲ್ಲಿ ಒಬ್ಬರಿಗೆ ನಾಯಕನ ಪಟ್ಟ ಒಲಿಯಲಿದೆ. ಕಳೆದ ವರ್ಷ ನಾಯಕತ್ವ ವಹಿಸಿದ್ದ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್ ತಂಡದ ಪಾಲಾಗಿದ್ದಾರೆ. ಹೀಗಾಗಿ ಅನುಭವಿ ಬ್ಯಾಟ್ಸ್ಮನ್ ರಹಾನೆಗೆ ನಾಯಕ ಸ್ಥಾನ ಕೊಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಐಪಿಎಲ್ ಹಾಗೂ ದೇಶಿ ಟೂರ್ನಿಗಳಲ್ಲಿ ರಹಾನೆ ನಾಯಕನ್ನಾಗಿ ತಂಡ ಮುನ್ನಡೆಸಿದ ಅನುಭವವಿದೆ ಹಾಗಾಗೀ ಬಹುತೇಕ ರಹಾನೆಗೆ ಈ ಬಾರಿ ಕೆಕೆಆರ್ ನಾಯಕನ ಪಟ್ಟ ಒಲಿಯಲಿದೆ ಎನ್ನಲಾಗುತ್ತಿದೆ.
