
ರಣಜಿ ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿರುವ ಶಾರ್ದೂಲ್ ಠಾಕೂರ್ ಮೇಘಾಲಯ ವಿರುದ್ದದ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ. ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ನಡೆಯುತ್ತಿರುವ ಪಂದ್ಯದಲ್ಲಿ ಮುಂಬೈನ ಬೌಲರ್ ಮೇಘಾಲಯ ಮೇಲೆ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಆ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದ ಮುಂಬೈನ 5 ನೇ ಬೌಲರ್ ಎನ್ನಿಸಿಕೊಂಡಿದ್ದಾರೆ. ಟಾಸ್ ಗೆದ್ದ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.

ಆರಂಭದಿಂದಲೇ ಮೇಘಾಲಯ ಬ್ಯಾಟರ್ಗಳಿಗೆ ಕಾಡಿದ ಠಾಕೂರ್ ಮೊದಲ ಓವರ್ನಲೇ ಒಂದು ವಿಕೆಟ್ ಪಡೆದರು. ನಂತರ 3ನೇ ಓವರ್ನ 4,5,6 ನೇ ಎಸೆತಗಳಲ್ಲಿ ಕ್ರಮವಾಗಿ 3 ವಿಕೆಟ್ ಪಡೆದರು. ಠಾಕೂರ್ ದಾಳಿಗೆ ನಡುಗಿದ ಮೇಘಾಲಯ 24.3 ಓವರ್ಗಳಲ್ಲಿ ಕೇವಲ 86 ರನ್ಗಳಿಗೆ ಅಲೌಟ್ ಆಗಿದೆ. ಮುಂಬೈ ಪರ ಶಾರ್ದೂಲ್ ಠಾಕೂರ್ 11 ಓವರ್ಗೆ 43 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಠಾಕೂರ್ ಕಳೆದ ಪಂದ್ಯದಲ್ಲಿ ಜಮ್ಮ ಕಾಶ್ಮೀರ ವಿರುದ್ದವೂ ಬ್ಯಾಟಿಂಗ್ನಲ್ಲಿ ಅರ್ಧ ಶತಕ ಹಾಗೂ ಶತಕ ಸಿಡಿಸಿದ್ದರು.
ಅಭಿಷೇಕ್ .ಎಸ್