
ರಣಜಿ ಟೂರ್ನಿಯಲ್ಲಿ ಕರ್ನಾಟಕ ತಂಡ ಹರಿಯಾಣ ವಿರುದ್ದ ಸಮಬಲದ ಹೋರಾಟ ನೀಡುತ್ತಿದೆ. ಮುಂದಿನ ಹತಕ್ಕೇರಲು ಗೆಲಲ್ಲೇ ಬೇಕಾದ ಒತ್ತಡದೊಂದಿಗೆ ಕಣಕ್ಕಿಳಿದ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 304 ರನ್ಗಳಿಗೆ ಅಲೌಟ್ ಆಯಿತ್ತು.ಇದರಿಂದ ಕರ್ನಾಟಕ ತಂಡ ಇನ್ನೂ ಪಂದ್ಯ ನಡೆಯುತ್ತಿರುವಾಗಲೇ ಟೂರ್ನಿಯಿಂದ ಹೊರಬೀಳುವ ಸಾಧ್ತತೆ ಹೆಚ್ಚಿದೆ. ಪಂದ್ಯದಲ್ಲಿ ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್ 91, ದೇವದತ ಪಡಿಕ್ಕಲ್ 43 ಕೆಎಲ್ ರಾಹುಲಕ್ 36, ಎಸ್ ರವಿಚಂದ್ರನ್ 35,ಪ್ರತಾಪ್ 35 ಅವರ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ 304 ರನ್ ಕಲೆ ಹಾಕಿತ್ತು. ನಂತರ ಬ್ಯಾಟಿಂಗ್ ಶುರು ಮಾಡಿದ ಹರಿಯಾಣ ಎ.ರಾಜೇಶ್ ಕುಮಾರ್ (118),ಯುವರಾಜ್ ಸಿಂಗ್ (33),ನಿಶಾಂತ್ ಸಿಂಧು (35) ರನ್ಗಳಿಂದ ಹರಿಯಾಣ 232 ರನ್ಗಳನ್ನ ಕಲೆ ಹಾಕಿದೆ. ಇನ್ನೂ 5 ವಿಕೆಟ್ ಕೈಯಲಿದ್ದು 72 ರನ್ಗಳ ಹಿನ್ನಡೆಯಲ್ಲಿದೆ. ಹೀಗಾಗಲೇ ಕೇರಳ ತಂಡ ಬಿಹಾರ ವಿರುದ್ದ ಗೆದ್ದು27 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಭದ್ರಪಡಿಸಿಕೊಂಡಿದೆ. ಹೀಗಾಗಿ ಕರ್ನಾಟಕ ತಂಡ ಬಹುತೇಕ ಕ್ವಾರ್ಟರ್ ಫೈನಲ್ಗೆ ಹೋಗುವ ಅವಕಾಶ ಕಳೆದುಕೊಳ್ಳಲಿದೆ.
