
ಫೆಬ್ರವರಿ 19 ರಂದು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಇಂದೇ ತಂಡವನ್ನು ಫೈನಲ್ ಮಾಡವುದಕ್ಕೆ ಕೊನೆ ದಿನವಾಗಿದೆ. ಭಾರತ ತಂಡದ ಮುಖ್ಯ ಬೌಲರ್ ಜಸ್ಪೀತ್ ಬೂಮ್ರಾ ಟೂರ್ನಿಯಲ್ಲಿ ಆಡಲಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಬೆನ್ನು ನೋವಿನಿಂದ ಬಳಲುತ್ತಿರುವ ಬೂಮ್ರಾ ಸದ್ಯಕ್ಕೆ ಚೇತರಿಕೆ ಹಂತದಲ್ಲಿದ್ದಾರೆ .

ಫೆಬ್ರವರಿ 11ರ ಒಳಗೆ ಬಿಸಿಸಿಐ ಐಸಿಸಿಗೆ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಅಂತಿಮ ಪಟ್ಟಿಯನ್ನು ಸಲ್ಲಿಸಬೇಕು. ಹೀಗಾಗಿ ಜಸ್ಪೀತ್ ಬೂಮ್ರಾ ಅವರ ಫಿಟ್ನೆಸ್ ನೋಡಿಕೊಂಡು ಮುಂದಿನ ನಿರ್ಧಾರ ಕೈ ಗೊಳ್ಳುವುದರ ಬಗ್ಗೆ ಬಿಸಿಸಿಐ ಇದೆ. ಒಂದು ವೇಳೆ ಬೂಮ್ರಾ ಸಂಪೂರ್ಣವಾಗಿ ಫಿಟ್ ಆದರೆ ಭಾರತ ತಂಡದ ಬೌಲಿಂಗ್ ವಿಭಾಗಕ್ಕೆ ಆನೆಬಲ ಬಂದಂತಾಗುತ್ತದೆ. ಟೂರ್ನಿಗೆ ಬೂಮ್ರಾ ಆಯ್ಕೆಯಾಗದಿದ್ದರೆ ಭಾರತಕ್ಕೆ ದೊಡ್ಡ ಹೊಡೆತ ಬೀಳಲಿದೆ. ಟೂರ್ನಿಯಲ್ಲಿ ಬಾಂಗ್ಲಾದೇಶ ಭಾರತಕ್ಕೆ ಮೊದಲ ಎದುರಾಳಿಯಾಗಿದೆ..
ಅಭಿಷೇಕ್ ಎಸ್