
ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿಗೆ ಯು.ಪಿ ವಾರಿಯರ್ಸ್ ತಂಡ ಸೆಣಸಾಡಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಆರ್ಸಿಬಿ ಈ ಆವೃತ್ತಿಯಲ್ಲಿ ಉತ್ತಮ ಆರಂಭ ಮಾಡಿತ್ತು. ಮೊದಲೆರಡು ಪಂದ್ಯದಲ್ಲಿ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಆದರೆ ಕಳೆದ ಪಂದ್ಯದಲ್ಲಿ ಸೀಸನ್ 1ರ ಚಾಂಪಿಯನ್ ಮುಂಬೈ ವಿರುದ್ಧ ಸ್ಮೃತಿ ಮಂಧಾನ ಪಡೆ ಮಂಡಿಯೂರಿತ್ತು. ಹೀಗಾಗಿ ಮತ್ತೆ ಆರ್ಸಿಬಿ ಜಯದ ಹಳಿಗೆ ಮರಳಲು ಎದರು ನೋಡುತ್ತಿದೆ.

ಸ್ಮೃತಿ ಮಂಧಾನ , ರಿಚಾ ಘೋಷ್, ಎಲ್ಲಿಸ್ ಪೆರ್ರಿ, ಕನಿಕಾ ಅಹುಜಾ, ರೇಣುಕಾ ಸಿಂಗ್, ಡೇನಿಯಲ್ ವ್ಯಾಟ್ ಹಾಡ್ಜ್, ಜೋಶಿತಾರಂತಹ ಆಟಗಾರರಿದ್ದಾರೆ. ಇತ್ತ ಯು . ಪಿ ವಾರಿಯರ್ಸ್ ಕೂಡ ಆಡಿದ 3 ಪಂದ್ಯದಿಂದ 2ರಲ್ಲಿ ಸೋತಿದೆ. ತಂಡದಲ್ಲಿ ದೀಪ್ತಿ ಶರ್ಮಾ, ಉಮಾ ಚೆಟ್ರಿ, ಕಿರಣ್ ನವಗಿರೆ, ವೃಂದಾ ದಿನೇಶ್, ತಾಲಿಯಾ ಮೆಕ್ಗ್ರಾತ್, ಗ್ರೇಸ್ ಹ್ಯಾರಿಸ್ರಂತಹ ಆಟಗಾರರಿದ್ದು ಅವರ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ. ಆರ್ಸಿಬಿ ಈ ಪಂದ್ಯವನ್ನು ಗೆದ್ದು ತವರಿನಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ. ಚಿನ್ನಸ್ವಾಮಿಯಲ್ಲಿ ಬ್ಯಾಟಿಂಗ್ಗೆ ಅನುಕೂಲವಾಗಿರುವುದರಿಂದ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವತ್ತ ಗಮನ ಹರಿಸಲಿದೆ..
ಅಭಿಷೇಕ್ ಎಸ್